ಯಾರದ್ದೋ ಬೇಸ್ ಲೆಸ್ ಆರೋಪಕ್ಕೆ ನಾನು ಉತ್ತರ ಕೊಡಬೇಕಾಗಿಲ್ಲ ಎಂದು ಡಿಸಿಎಂ ಗೋವಿಂದ್ ಕಾರಜೋಳ ಹೇಳಿದ್ದಾರೆ. ಕೋವಿಡ್ ಪರಿಕರ ಖರೀದಿ ಹಗರಣ ಆರೋಪ ಹಿನ್ನೆಲೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಾಡಿರುವ ಆರೋಪ ಬೇಸ್ಲೆಸ್ ಆರೋಪ ಇದೇ ಮಾತನ್ನು ಹತ್ತು ಸಾರಿ ಹೇಳ್ತೇನೆ,ವಿಧಾನಸಭೆ ಕಲಾಪದಲ್ಲೂ ಹೇಳ್ತೇನೆ. ಸಮಾಜಕಲ್ಯಾಣ ಇಲಾಖೆಯಡಿ ಸ್ಯಾನಿಟೈಸ್ ಮಾಸ್ಕ್ ಇವುಗಳಲ್ಲಿ ಯಾವುದೇ ಗೋಲ್ಮಾಲ್ ಹಗರಣ ಆಗಿಲ್ಲ. ದಲಿತ ಸಂಘರ್ಷ ಸಮಿತಿಯವರಿಗೂ ಮಾಹಿತಿ ಕೊರತೆ ಇದೆ. ಈ ರೀತಿಯ ಬೇಸ್ಲೆಸ್ ಆರೋಪ ಸರಿಯಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಕಾರಜೋಳ ಆಕ್ರೋಶ
Please follow and like us: