ಸಿ.ಟಿ.ರವಿ ತಂದೆ ತಿಮ್ಮೇಗೌಡ ನಿಧನ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅವರ ತಂದೆ ತಿಮ್ಮೇಗೌಡ(97) ಶನಿವಾರ ನಿಧನರಾದರು.ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ತಿಮ್ಮೇಗೌಡರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಾಗರವಳ್ಳಿಯಲ್ಲಿ ಭಾನುವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ತಿಮ್ಮೇಗೌಡ ಅವರು ಪತ್ನಿ ಹೊನ್ನಮ್ಮ, ಪುತ್ರರಾದ ಸಿ.ಟಿ. ರವಿ, ಸಿ.ಟಿ. ರಘು, ಪುತ್ರಿಯರಾದ ರೇಣುಕಾ, ರೋಹಿಣಿ, ರೇವತಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕೆನಡಾ ಗಡಿಭಾಗದಲ್ಲಿ ಹೆಪ್ಪುಗಟ್ಟಿ ಮೃತಪಟ್ಟ ಭಾರತೀಯ ಕುಟುಂಬದ ಗುರುತು ಪತ್ತೆ

Sat Jan 29 , 2022
ಒಟ್ಟಾವ, ಜ.28: ಅಮೆರಿಕ-ಕೆನಡಾ ಗಡಿಭಾಗದ ಎಮರ್ಸನ್ ಬಳಿ ಕಳೆದ ವಾರ ಹಿಮಪಾತಕ್ಕೆ ಸಿಲುಕಿ ಹೆಪ್ಪುಗಟ್ಟಿ ಮೃತಪಟ್ಟ ಭಾರತೀಯ ಕುಟುಂಬದವರ ಗುರುತನ್ನು ಪತ್ತೆಹಚ್ಚಲಾಗಿದೆ ಎಂದು ಕೆನಡಾದ ಅಧಿಕಾರಿಗಳು ಹೇಳಿದ್ದಾರೆ.ಮೃತಪಟ್ಟವರನ್ನು ಭಾರತೀಯರಾದ ಜಗದೀಶ್ ಕುಮಾರ್ ಪಟೇಲ್(39 ವರ್ಷ), ವೈಶಾಲಿ ಬೆನ್ ಪಟೇಲ್ (37 ವರ್ಷ), ವಿಹಾಂಗಿ ಪಟೇಲ್(11 ವರ್ಷ) ಮತ್ತು ಧಾರ್ಮಿಕ್ ಪಟೇಲ್(3 ವರ್ಷ) ಎಂದು ಗುರುತಿಸಲಾಗಿದೆ.ಗುಜರಾತ್ ನ ದಿಂಗುಚಾ ಗ್ರಾಮದ ಈ ಕುಟುಂಬ ಕೆನಡಾಕ್ಕೆ ವಲಸೆ ಹೋಗಿದೆ ಎಂದು ಮಾಧ್ಯಮಗಳು ವರದಿ […]

Advertisement

Wordpress Social Share Plugin powered by Ultimatelysocial