ಸುಶಾಂತ್ ಪ್ರಕರಣದ ಸಿಬಿಐ ತನಿಖೆ ಕೋರಿದ್ದ ಸುಬ್ರಮಣಿಯನ್ ಸ್ವಾಮಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬರೆದಿದ್ದ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅಂಗೀಕರಿಸಿದ್ದಾರೆ. ಈ ಕುರಿತು ಸುಬ್ರಮಣಿಯನ್ ಸ್ವಾಮಿ ಅವರಿಗೆ ಪತ್ರ ಬರೆದಿರುವ ಪ್ರಧಾನಿ, ನೀವು ಬರೆದಿರುವ ಪತ್ರ ಜುಲೈ ೧೫ರಂದು ನನ್ನ ಕೈ ಸೇರಿದೆ ಎಂದಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ ೧೪ರಂದು ಮುಂಬೈನ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇದು ಅಸಹಜ ಸಾವು, ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಗಳು ಕೇಳಿಬಂದಿತ್ತು. ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದರು. ತನ್ನಂತೆ ಪ್ರಧಾನಿ ಮೋದಿಗೆ ಈ ಬಗ್ಗೆ ಪತ್ರ ಬರೆಯುವಂತೆ ಕೇಳಿಕೊಂಡಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಕೋಲಾರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಕಳ್ಳತನ

Sun Jul 26 , 2020
ಕೋಲಾರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಕಳ್ಳತನ ಕಾರಿನ ಗ್ಲಾಸ್ ಹೊಡೆದು 4 ಲಕ್ಷ ರೂಪಾಯಿ ಲಪಟಾಯಿಸಿ ಪರಾರಿ ಆಗಲು ಯತ್ನ. ಬೆಂಗಳೂರು ಜಲ ನಿಗಮ ಮಂಡಳಿ ಮ್ಯಾನೇಜರ್ ಕೇಶವಮೂರ್ತಿ ಎಂಬುವವರಿಗೆ ಸೇರಿರುವ ಕಾರು. ಬೆಂಗಳೂರಿನಿಂದ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಕೇಶವಮೂರ್ತಿ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ವಾಪಸ್ಸಾಗುವ ವೇಳೆ ಕೃತ್ಯ. ಕಾರು ಚಾಲಕನಿಗೆ ಹಣ ಇದೆ ಹುಷಾರು ಎಂದು ಹೇಳಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದ ಕೇಶವಮೂರ್ತಿ ಡಿಸಿ ಕಚೇರಿಗೆ ಹೋಗುತ್ತಿದ್ದಂತ್ತೆ […]

Advertisement

Wordpress Social Share Plugin powered by Ultimatelysocial