ಹರಪನಹಳ್ಳಿ ಪಟ್ಟಣದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಕೆ.ಕುಮಾರ ನೇತೃತ್ವದಲ್ಲಿ ನಡೆದ ಬೈಕ್ ರಾಲಿ ಮೂಲಕ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಾ ಅಪಘಾತವಾದಲ್ಲಿ ಹೆಚ್ಚು ಸಾವು ಸಂಭವಿಸುತ್ತಿರುವ ಪರಿಣಾಮ ಹೆಲ್ಮೆಟ್ ಕಡ್ಡಾಯ ಮಾಡಲಾಗುತ್ತಿದ್ದು
ದಂಡ ಅಥವಾ ಹೆಲ್ಮೆಟ್ ಖರೀದಿ ಸ್ಥಳದಲ್ಲೇ ಮಾಡುತ್ತಾ ಜಾಗೃತಿ ಅಭಿಯಾನ ಕೈಗೊಂಡಿದ್ದೇವೆ. ಪ್ರತಿ ದಿನ ಪಟ್ಟಣದ ನಾಲ್ಕು ವೃತ್ತಗಳಲ್ಲಿ ಮದ್ಯಾಹ್ನದ ವರಗೆ ದಂಡ ಅಥವಾ ಹೆಲ್ಮೆಟ್ ಖರೀದಿಗೆ ಅವಕಾಶ ನೀಡುತ್ತೇವೆ. ನಂತರ ಕಡ್ಡಾಯವಾಗಿ ದಂಡ ಕಟ್ಟಬೇಕು ಹಾಗೂ ಪ್ರಕರಣ ದಾಖಲು ಮಾಡುತ್ತೇವೆ. ಆದ್ದರಿಂದ ವಾಹನ ಸವಾರರು ನಿರ್ಲಕ್ಷ ತೋರಿಸದೇ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನ ನಡೆಸಬೇಕು ಎಂದರು.