ಹಸುಗಳೊಂದಿಗೆ ಅಸಹಜ ಲೈಂಗಿಕ ಕ್ರಿಯೆ: ವಿಕೃತ ಯುವಕನ ಬಂಧನ

 

ಬೆಂಗಳೂರು: ಗೋವುಗಳ ಜತೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವಿಕೃತ ವ್ಯಕ್ತಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.ದಾವಣಗೆರೆ ಮೂಲದ ವೆಂಕಟೇಶ್‌ (22) ಬಂಧಿತ. ಆರೋಪಿ ಸಿಂಗಾಪುರ ಲೇಔಟ್‌ನ ಮುನಿ ಹನು ಮಂತಪ್ಪ ಎಂಬುವರಿಗೆ ಸೇರಿದ ಹಸುವಿನ ಜತೆ ಅಸಹಜ ಕ್ರಿಯೆ ನಡೆಸುವಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು.ಸಿಂಗಾಪುರ ಲೇಔಟ್‌ನಲ್ಲಿ ಮುನಿ ಹನುಮಂತಪ್ಪ ಐದಾರು ಹಸುಗಳನ್ನು ಸಾಕಿದ್ದಾರೆ. ಮನೆ ಮುಂಭಾಗದ ಸ್ಥಳದಲ್ಲಿಯೇ ಗೋವುಗಳಿಗೆ ಕೊಟ್ಟಿಗೆ ನಿರ್ಮಿಸಿಕೊಳ್ಳಲಾಗಿದೆ. ಫೆ. 19ರಂದು ರಾತ್ರಿ ವೇಳೆ ಆರೋಪಿ ವೆಂಕಟೇಶ್‌ ಗೋವುಗಳ ಜತೆ ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಅದನ್ನು ಗಮನಿಸಿದ ಸ್ಥಳೀಯರು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅದರಿಂದ ಅಚ್ಚರಿಗೊಂಡ ಹನುಮಂತಪ್ಪ ಮರು ದಿನ ರಾತ್ರಿಯಿಡಿ ಕಾಯ್ದುಕೊಂಡು ಕುಳಿತಿದ್ದರು. ಆಗ ಕೊಟ್ಟಿಗೆಗೆ ಬಂದ ಆರೋಪಿ, ವಿವಸ್ತ್ರನಾಗಿ ಕೊಟ್ಟಿಗೆಯಲ್ಲಿ ಹಸುಗಳ ಜತೆ ವಿಕೃತವಾಗಿ ವರ್ತಿಸಿದ್ದಾನೆ.ಆರೋಪಿಯನ್ನು ಸ್ಥಳದಲ್ಲೇ ಹಿಡಿದುಕೊಂಡು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ವಿರುದ್ಧ ಅಸಹಜ ಲೈಂಗಿಕ ಕ್ರಿಯೆ ಹಾಗೂ ಜಾನುವಾರುಗಳ ಮೇಲೆ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ ಉಕ್ರೇನ್ ಯುದ್ಧ: ರಷ್ಯಾ ಚೆರ್ನೋಬಿಲ್ ಅನ್ನು ಏಕೆ ವಶಪಡಿಸಿಕೊಂಡಿತು?

Fri Feb 25 , 2022
ರಷ್ಯಾ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ಏಕೆ ತೆಗೆದುಕೊಂಡಿತು?: ಉಕ್ರೇನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಪ್ರಕಾರ, ರಷ್ಯಾದ ಪಡೆಗಳು ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಹಿಡಿತ ಸಾಧಿಸಿವೆ. 1986 ರಲ್ಲಿ ರಿಯಾಕ್ಟರ್‌ಗಳಲ್ಲಿ ಒಂದು ಸ್ಫೋಟಗೊಂಡಾಗ ಚೆರ್ನೋಬಿಲ್ ವಿಶ್ವದ ಅತ್ಯಂತ ಭೀಕರ ಪರಮಾಣು ದುರಂತದ ತಾಣವಾಗಿತ್ತು. ಪರಮಾಣು ವಿದ್ಯುತ್ ಸ್ಥಾವರವು ಉಕ್ರೇನಿಯನ್ ರಾಜಧಾನಿ ಕೈವ್‌ನಿಂದ ಸುಮಾರು 60 ಮೈಲುಗಳಷ್ಟು ದೂರದಲ್ಲಿದೆ. ರಷ್ಯಾಕ್ಕೆ ಚೆರ್ನೋಬಿಲ್ ಏಕೆ ಬೇಕು? ಫೆಬ್ರವರಿ […]

Advertisement

Wordpress Social Share Plugin powered by Ultimatelysocial