ಕೊರೊನಾದಿಂದ ಲಾಕ್ಡೌನ್ ಉಂಟಾದ ಪರಿಣಾಮ ಶಾಲಾ – ಕಾಲೇಜುಗಳು ಬಂದ್ ಆಗಿದ್ದು, ಆನ್ ಲೈನ್ ಕ್ಲಾಸ್ ನಡೆಸಲು ಸರ್ಕಾರ ಮುಂದಾಗಿದೆ. ಅದರಂತೆಯೇ ಸರ್ಕಾರ ಕನಿಷ್ಟ ಪಕ್ಷ ಹೈಸ್ಕೂಲ್ ವಿದ್ಯಾರ್ಥಿಗಳಿಗಾದರು ಸ್ಮಾರ್ಟ್ ಫೋನ್ ಒದಗಿಸಿಕೊಡಬೇಕೆಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ಸಿ.ಎಂ ಬಿಎಸ್ವೈಗೆ ಮನವಿ ಮಾಡಿದ್ದಾರೆ. ಬೀದರ್ನಲ್ಲಿ ಮಾತನಾಡಿದ ಅವರು, ಆನ್ಲೈನ್ ಕ್ಲಾಸ್ ಜಾರಿಗೊಳಿಸಲು ಶಿಕ್ಷಣ ಇಲಾಖೆ ಯಾವ ರೀತಿ ಸಿದ್ದತೆ ಮಾಡಿಕೊಂಡಿದೆ. ಯಾವ ರೀತಿಯ ಸಿದ್ದತೆ ಮಾಡಿಕೊಳ್ಳಬೇಕಾಗಿದೆ ಎಂಬ ಸಲಹೆ ನೀಡಿದರು. ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಪೋನ್ ಖರೀದಿಸಲು ಕಷ್ಟವಾಗಲಿದ್ದು, ಸರ್ಕಾರವೇ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಪೋನ್ ಒದಗಿಸಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೀದರ್ ಡಿಡಿಪಿಐ ಎಚ್.ಸಿ ಚಂದ್ರಶೇಖರ, ಹುಮನಾಬಾದ್ ಬಿಇಒ ಶಿವಗುಂಡಪ್ಪ ಎಸ್ ಸಿದ್ದಗೋಳ, ಬೀದರ್ ಬಿಇಒ ಸೂರ್ಯಕಾಂತ ಮಹಾನೆ, ಬೇಮಳಖೇಡ ಸಿಆರ್ಪಿ ರಾಜಪ್ಪ ಉಪಸ್ಥಿತರಿದ್ದರು.