ಮಧ್ಯರಾತ್ರಿ ಮತ್ತೊಬ್ಬ ಸ್ಪರ್ಧಿಯನ್ನು ಹೊರಕಳಿಸಿ ಮತ್ತೆ ಮನೆಯವರಿಗೆ ಶಾಕ್ ನೀಡಲಾಗಿದೆ. ಅದಕ್ಕೂ ಮುನ್ನ ಬಿಗ್ ಬಾಸ್, ಸ್ಪರ್ಧಿಗಳಿಗೆ ಆಟ ಆಡಿಸಿದ್ದಾರೆ. ಮ್ಯೂಸಿಕ್ ಹಾಕಿ ಕುಣಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಮಧ್ಯರಾತ್ರಿ ಎಲ್ಲಾ ಸ್ಪರ್ಧಿಗಳನ್ನು ಎಬ್ಬಿಸಿ ಸ್ಟೋರ್ ರೂಮ್ನಲ್ಲಿ ಲಗ್ಗೇಜ್ ಇಡುವಂತೆ ಹೇಳಿ, ಗಾರ್ಡನ್ ಏರಿಯಾಗೆ ಬಂದು ನಿಲ್ಲುವಂತೆ ಸೂಚಿಸುತ್ತಾರೆ ಬಿಗ್ ಬಾಸ್ ಸೀಸನ್ 9 ಫೈನಲ್ಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಕಿಚ್ಚ ಸುದೀಪ್ ಫೈನಲ್ಗೆ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಇಬ್ಬರನ್ನೂ ಫೈನಲ್ ಮಾಡಿದ್ದಾರೆ. ಸದ್ಯಕ್ಕೆ ಮನೆಯಲ್ಲಿ 5 ಮಂದಿ ಉಳಿದಿದ್ದಾರೆ. ಒಟಿಟಿ ಶೋನಿಂದಲೂ ಬಿಗ್ಬಾಸ್ ಮನೆಯಲ್ಲಿ ಸೇಫ್ ಆಗಿದ್ದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಕೊನೆಗೂ ಮನೆಯಿಂದ ಹೊರಹೋಗಿದ್ದಾರೆ.ಕಳೆದ ವಾರ ಬಿಗ್ಬಾಸ್ನಿಂದ ಅಮೂಲ್ಯ ಗೌಡ ಹಾಗೂ ಅರುಣ್ ಸಾಗರ್ ಇಬ್ಬರೂ ಹೊರ ಹೋಗಿದ್ದರು. ಸಾಮಾನ್ಯವಾಗಿ ಪ್ರತಿ ಶನಿವಾರ ಹಾಗೂ ಭಾನುವಾರ ,ವಾರದ ಕಥೆ ಕಿಚ್ಚನ ಜೊತೆ, ಎಪಿಡೋಡ್ ನಡೆಯುತ್ತದೆ. ವಾರವಿಡೀ, ಮನೆಯಲ್ಲಿ ನಡೆದ ವಿಚಾರಗಳನ್ನು ಶನಿವಾರ ಕಿಚ್ಚ, ಸ್ಪರ್ಧಿಗಳೊಂದಿಗೆ ಚರ್ಚಿಸುತ್ತಾರೆ. ಭಾನುವಾರದ ಎಪಿಸೋಡ್ನಲ್ಲಿ ಕೂಡಾ ಈ ಚರ್ಚೆ ಮುಂದುವರೆಯುತ್ತದೆ. ಆದರೆ ಕೊನೆಯ ಕೆಲವು ಕ್ಷಣಗಳ ಕಾಲ ಎಲಿಮಿನೇಶನ್ ಪ್ರಕ್ರಿಯೆ ನಡೆಯಲಿದ್ದು ಆ ವೇಳೆ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರ ಕಳಿಸಲಾಗುತ್ತದೆ. ಆದರೆ ಕಳೆದ ಶನಿವಾರ ಕಿಚ್ಚ ಅಮೂಲ್ಯ ಗೌಡ ಅವರನ್ನು ಎಲಿಮಿನೇಟ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದರು. ಫೈನಲ್ಗೆ ಇನ್ನು ಒಂದು ವಾರ ಮಾತ್ರವೇ ಬಾಕಿ ಉಳಿದಿದ್ದು ಇನ್ನೂ ಒಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಅದರಂತೆ ಭಾನುವಾರದ ಎಪಿಸೋಡ್ನಲ್ಲಿ ಅರುಣ್ ಸಾಗರ್ ಎಲಿಮಿನೇಟ್ ಆಗಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…