ದಕ್ಷಿಣ ಸಿನಿಮಾ ಸ್ಟಾರ್ಗಳ ನೆಚ್ಚಿನ ಡಬ್ಬಿಂಗ್ ಕಲಾವಿದ ಶ್ರೀನಿವಾಸ್ ಮೂರ್ತಿ ಕೊನೆಯುಸಿರೆಳೆದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳು ತೆಲುಗಿಗೆ ವಾಯ್ಸ್ ಡಬ್ಬ ಆಗಬೇಕಾದ್ರೆ ಅದಕ್ಕೆ ಶ್ರೀನಿವಾಸ್ ಮೂರ್ತಿಯವರೇ ವಾಯ್ಸ್ ಡಬ್ ಮಾಡುತ್ತಿದ್ದರು.
1990ರಲ್ಲಿ ಶ್ರೀನಿವಾಸ್ ‘ಒಕೇ ಒಕ್ಕಡು’ ಎನ್ನುವ ಅರ್ಜುನ್ ಸರ್ಜಾ ಅಭಿನಯದ ಸಿನಿಮಾಕ್ಕೆ ವಾಯ್ಸ್ ಮೊಟ್ಟ ಮೊದಲ ಬಾರಿಗೆ ನೀಡಿದ್ರು. ಅಲ್ಲಿಂದ ಇವರೇ ವಾಯ್ಸ್ ಡಬ್ಬಿಂಗ್ನಲ್ಲಿ ಮೊದಲಿಗರಾಗಿ ಗುರುತಿಸಿಕೊಂಡರು. ತಮಿಳು ನಟ ಸೂರ್ಯ, ಅಜಿತ್, ವಿಕ್ರಮ್, ಕೇರಳದ ಮೋಹನ್ ಲಾಲ್ ಸೇರಿದಂತೆ ದಕ್ಷಿಣ ಭಾರತದ ಅನೇಕ ಜನಪ್ರಿಯ ನಟರ ಚಿತ್ರಗಳಿಗೆ ತೆಲುಗಿನಲ್ಲಿ ಡಬ್ಬಿಂಗ್ ಮಾಡ್ತಿದ್ದರು. ಅಲ್ಲದೇ ತೆಲುಗಿಗೆ ಡಬ್ ಆಗ್ತಿದ್ದ ಬಹುತೇಕ ಸಿನಿಮಾಗಳ ನೆಗೆಟಿವ್ ರೋಲ್ಗಳಿಗೆ ಇವರದ್ದೇ ವಾಯ್ಸ್ ಇರುತ್ತಿತ್ತು.
ಬಾಲಿವುಡ್ನ ಶಾರುಖ್ ಖಾನ್, ಸಲ್ಮಾನ್ ಖಾನ್ ಚಿತ್ರಗಳಿಗೆ ತೆಲುಗು ಡಬ್ ಮಾಡಿದ್ದ ಶ್ರೀನಿವಾಸ್ ಮೂರ್ತಿ ಹಾಲಿವುಡ್ ಚಿತ್ರಗಳು ಬಂದಾಗಲೂ ತಮ್ಮ ವಿಶಿಷ್ಠ ಧ್ವನಿಯಿಂದ ಗಮನ ಸೆಳೆದಿದ್ದರು.
https://play.google.com/store/apps/details?id=com.speed.newskannada