ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಪ್ರಪ್ರಥಮ ಬಾರಿಗೆ ಆಗಮಿಸಿದ ಚಿತ್ರನಟಿ ಸಮಾಜ ಸೇವಕಿ ಮಿಸ್ ಇಂಡಿಯಾ 2021ವಿಜೇತರು ಡಾಕ್ಟರ್ ಪೂಜಾ ರಮೇಶ ಇವರಿಗೆ ಮಾನ್ವಿ ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಿಂದ ಬಹಳ ಅದ್ದೂರಿಯಾಗಿ ಸ್ವಾಗತಿಸಲಾಯಿತು ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಕಲರವ ಕಾರ್ಯಕ್ರಮವನ್ನು ಡಾಕ್ಟರ್ ಪೂಜಾ ರಮೇಶ ಇವರು ಉದ್ಘಾಟಿಸಿದರು ಇದೇ ಸಂದರ್ಭದಲ್ಲಿ ಡಾಕ್ಟರ್ ಪೂಜಾ ರಮೇಶ್ ಮಾತನಾಡಿ ನನಗೆ ಮೊದಲಿನಿಂದಲೂ ಶಾಲಾ ವಿದ್ಯಾರ್ಥಿಗಳೆಂದರೆ ಅಚ್ಚುಮೆಚ್ಚು ಇವತ್ತು ನೇತಾಜಿ ಶಿಕ್ಷಣ ಸಂಸ್ಥೆಯ ಮುದ್ದು ಮಕ್ಕಳ ಜೊತೆಯಲ್ಲಿ ಸೇರಿ ನಾನು ಮಗುವಾಗಿ ಬಗೂರಿ ಅಡಿದ್ದೇನೆ ಹಗ್ಗಾಟ ಮತ್ತು ನೃತ್ಯ ಮಾಡಿದ್ದೇನೆ ಇಲ್ಲಿಯ ಶಿಕ್ಷಕರ ಜೊತೆ ಸೇರಿ ಮ್ಯೂಜಿಕಲ್ ಚೇರ ಆಡಿದ್ದೇನೆ ಇದು ನನಗೆ ಮತ್ತೆ ನನ್ನ ಬಾಲ್ಯವನ್ನು ನೆನಪಿಗೆ ತಂದಿದೆ ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಕಲಾ ಸಂಕಲ ಸಂಸ್ಥೆಯ ಅಧ್ಯಕ್ಷ ಮಾರುತಿ ಬಡಿಗೇರ್ ಸಂಸ್ಥೆಯ ಅಧ್ಯಕ್ಷರು ಕೆ.ಈ. ನರಸಿಂಹ .ಪಕ್ಷಿ ಪ್ರೇಮಿ. ಸಲಾವುದ್ದೀನ್. ಮತ್ತು ಕಾರ್ಯದರ್ಶಿ. ಕೆ. ವಿಜಯಲಕ್ಷ್ಮಿ. ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada