ಪುನೀತ್ ರಾಜ್ಕುಮಾರ್ ಇದ್ದಾಗಲೂ ಸಾವಿರಾರು ಜನರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೆರವಾಗಿದ್ದರು. ಅಪ್ಪು ಅಗಲಿದ ಬಳಿಕವೂ ತಮ್ಮ ಸೇವೆ ಮುಂದುರೆಸಿದ್ದಾರೆ.ಅಪ್ಪು, ಸ್ವರ್ಗದಿಂದಲೂ ಪರೋಕ್ಷವಾಗಿ ತಮ್ಮ ಸೇವೆ ಮುಂದುವರೆಸಿದ್ದಾರೆ, ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ, ಇಂದು (ಜನವರಿ 06) ಹಾವೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ವ್ಯಕ್ತಿಯೊಬ್ಬರು ಕೇವಲ ಒಂದು ಗಂಟೆಯಲ್ಲಿ ನೂರು ಅಪ್ಪು ಚಿತ್ರಗಳನ್ನು ಮಾರಾಟ ಮಾಡಿದ್ದಾರೆ.ಆ ಮೂಲಕ ತಮ್ಮ ತುತ್ತಿನ ಚೀಲ ತುಂಬಿಸಿಕೊಂಡಿದ್ದಾರೆ.ಇಂದು ಬೆಳಿಗ್ಗೆ ಹಾವೇರಿ ಸಮ್ಮೇಳನ ಉದ್ಘಾಟನೆಯಾಗಿದ್ದು ಮಳಿಗೆಗಳು ಸಹ ಇಂದು ಬೆಳಿಗ್ಗೆಯೇ ಕಾರ್ಯಾರಂಭ ಮಾಡಿವೆ. ಮಳಿಗೆಗಳು ವ್ಯಾಪಾರಕ್ಕೆ ಮುಕ್ತಗೊಂಡ ಕೇವಲ ಒಂದು ಗಂಟೆಯಲ್ಲಿ ಪುರುಷೋತ್ತಮ ಹಿರೇಮಠ ಹೆಸರಿನ ವ್ಯಾಪಾರಿಯೊಬ್ಬರು ಸುಮಾರು 100 ಅಪ್ಪು ಅವರ ಪ್ರೇಂ ಹೊಂದಿದ ಚಿತ್ರಗಳನ್ನು ಮಾರಾಟ ಮಾಡಿದ್ದಾರೆ.ಇಂದೂ ಸೇರಿದಂತೆ ಮೂರು ದಿನಗಳ ಕಾಲ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇನ್ನೂ ಮೂರು ದಿನಗಳ ಕಾಲ ಪುರುಷೋತ್ತಮ ಹಿರೇಮಠ ಅವರು ತಮ್ಮ ಮಳಿಗೆಯಲ್ಲಿ ಅಪ್ಪು ಅವರ ಚಿತ್ರವಿರುವ ಪ್ರೇಮ್ಗಳನ್ನು ಮಾರಾಟ ಮಾಡಲಿದ್ದಾರೆ.ಕೇವಲ ಒಂದು ಗಂಟೆಯಲ್ಲಿ ನೂರು ಭಾವಚಿತ್ರ ಮಾರಾಟವಾಗಿರುವುದು ಅಪ್ಪು ಅವರ ಬಗ್ಗೆ ಜನರಿಗಿರುವ ಪ್ರೀತಿ, ಗೌರವಕ್ಕೆ ಉದಾಹರಣೆ. ಅಪ್ಪು ಅವರು ಅಗಲಿದ ಬಳಿಕವೂ ಹಲವರ ಜೀವನ ನಿರ್ವಹಣೆಗೆ ದಾರಿಯಾಗಿದ್ದಾರೆ.ಅಪ್ಪು ಅವರ ಹಿರಿಮೆಗೆ ಇದೊಂದೆ ಉದಾಹರಣೆಯಲ್ಲ, ಅಪ್ಪು ಅವರ ಸಮಾಧಿ ಸ್ಥಳವಾದ ಕಂಠೀರವ ಬಳಿಯೂ ಸಹ ಹಲವರು ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಅಲ್ಲಿಯೂ ಸಹ ಅಪ್ಪು ಅವರ ಭಾವಚಿತ್ರಗಳು, ಟೀ-ಶರ್ಟ್ಗಳು, ಸಮಾಧಿಗೆ ಭೇಟಿ ಕೊಡುವವರು ಕೊಂಡೊಯ್ಯಲು ಹೂವು ಇತ್ಯಾದಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಎಲ್ಲರಿಗೂ ಕೈತುಂಬಾ ವ್ಯಾಪಾರ, ಜೇಬಿನ ತುಂಬ ಹಣ. ಹೂ ಕಟ್ಟಿ ಮಾರುವ ಮಹಿಳೆಯರು, ಮುದುಕಿಯರು ತಮ್ಮ ಜೀವನ ನಿರ್ವಣೆಗೆ ನೆರವಾದ ಅಪ್ಪುವನ್ನು ನೆನಯದ ದಿನವಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada