ಬೆಂಗಳೂರು :ವರ್ತೂರ್ ಬಾರ್ನ ಕೊಲೆ ದೃಶ್ಯ ಭಯಾನಕವಾಗಿದ್ದು, ಬಾರ್ನಲ್ಲಿ ನಡೆದ ಮರ್ಡರ್ CCTVಯಲ್ಲಿ ಸೆರೆಯಾಗಿದೆ. SSS ಬಾರ್ನಲ್ಲಿ ಮುನಿಯಪ್ಪ ಎಂಬಾತನ ಕೊಲೆಯಾಗಿದೆ.
ಕುಡಿದ ಅಮಲಿನಲ್ಲಿ ಮುನಿಯಪ್ಪ ಮತ್ತು ಶ್ರೀಧರ್ ನಡುವೆ ಗಲಾಟೆ ನಡೆದಿದೆ.
ಗಲಾಟೆ ವಿಕೋಪಕ್ಕೆ ತಿರುಗಿ ಶ್ರೀಧರ್ ಮಚ್ಚಿನಿಂದ ಬೀಸಿದ್ದಾನೆ. ಅಲಸಹಳ್ಳಿ ಮುಖ್ಯ ರಸ್ತೆಯ SSS ಬಾರ್ನಲ್ಲಿ ಹಲ್ಲೆ ನಡೆದಿದೆ. ಮುನಿಯಪ್ಪ, ಶ್ರೀಧರ್ ಒಂದೇ ಏರಿಯಾದಲ್ಲಿ ವಾಸವಿದ್ದರು. ವರ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಶ್ರೀಧರ್ ಬಂಧಿಸಿದ್ದಾರೆ. ಮುನಿಯಪ್ಪ ಶ್ರೀಧರ್ ಕುಡಿಯುತ್ತಾನೆ ಎಂದು ಆತನ ತಂದೆಗೆ ಹೇಳಿದ್ದರು. ಶ್ರೀಧರ್ ಇದೇ ವಿಚಾರಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada