ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾರರಲ್ಲಿ ತಮ್ಮ ಹಕ್ಕು ಚಲಾಯಿಸುವ ಕುರಿತು ಜಾಗೃತಿ ಮೂಡಿಸಲು ಮತದಾನ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನಮ್ಮ ವೋಟು, ನಮ್ಮ ಹಕ್ಕು, ನಮ್ಮ ನಡೆ ಮತದಾನ ಕಡೆ. ಮತದಾನ ಶೇಕಡಾ ಕಡಿಮೆ ಆಗುತ್ತಿರುವುದರಿಂದ ಗಣ ಸರಕಾರವು 15ದಿನದ ಮುಂಚೆಯೇ ಮತದಾರರಿಗೆ ತಿಳಿವಳಿಕೆ ಮೂಡಲ್ಲಿ ಎಂದು ಕಾರ್ಯಕ್ರಮ ನಡೆಯುತ್ತಿದೆ ಮಹಿಳಾ ಸಂಘದವರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಭೂತ ಮಠದ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು, ಎಲ್ಲರೂ ಸೇರಿ ಊರಿನಲ್ಲಿ ಜಾಗೃತಿ ಮೂಡಿಸೋಣ. ಮಳ್ಳಿ ಗ್ರಾಮದಲ್ಲಿ ಶೇಕಡಾ 100% ಕ್ಕಿಂತ 90% ಮತದಾನ ವಾದರೂ ಆಗಲಿ ಎಂದು ಅಮೂಗಿ ದೇವರ ಮನಿ ಹೇಳಿದರು.
ಮಹಿಳಾ ಸಂಘದ ಅಧ್ಯಕ್ಷರು ಮಹಾದೇವಿ ಕೋಟ್ಯಾಳ ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರತಿನಿಧಿ ಕಾಮಣ್ಣ ಪೂಜಾರಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮರಾಯ ಪೂಜಾರಿ, ಕಾಂಗ್ರೆಸ್ ಯುವ ಮುಖಂಡರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಬಸನಗೌಡ ಮಾಲಿ ಪಾಟೀಲ, ಶಿಕ್ಷಕರು, ದವಲು ಮುರುಡಿ, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಮತದಾನ ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
https://play.google.com/store/apps/details?id=com.speed.newskannada