ಹನೂರು: ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಹನೂರಿನ ಸ್ವಾತಿ ಎಂಬ ಮೆಡಿಕಲ್ ವಿದ್ಯಾರ್ಥಿನಿ ತಾಯ್ನಾಡಿಗೆ ಬಂದಿಳಿದಿದ್ದು ಜಿಲ್ಲೆಯ ಇನ್ನೂ ಇಬ್ಬರು ವಿದ್ಯಾರ್ಥಿಗಳು ಬರಬೇಕಿದೆ.ಉಕ್ರೇನ್ ನ ಕೀವ್ ನಗರದಲ್ಲಿ ತಾರಸ್ ಶೆವ್ಚೆಂಕೋ ರಾಷ್ಟ್ರೀಯ ವಿವಿಯಲ್ಲಿ ಐದನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹನೂರಿನ ಸ್ವಾತಿ ಇಂದು ಮಧ್ಯಾಹ್ನ ಬೆಂಗಳೂರಿಗೆ ಬಂದಿದ್ದಾರೆ. ಉಕ್ರೇನ್ ನಿಂದ ಹಂಗೇರಿ ಗಡಿಗೆ ತೆರಳಿ ಅಲ್ಲಿಂದ ಬುಡಾಪೇಸ್ಟ್ ಬಳಿಕ ದೆಹಲಿ ಅಲ್ಲಿಂದ ಬೆಂಗಳೂರಿಗೆ ಮರಳಿ ಬಂದಿದ್ದಾರೆ.ಸ್ವಾತಿ ಹನೂರಿನ ಸಂಜೆವಾಣಿ ಪತ್ರಿಕೆ ವರದಿಗಾರ ರವಿ ಎಂಬವರ ಮಗಳಾಗಿದ್ದಾರೆ. ಕೊಳ್ಳೇಗಾಲ ಮೂಲದ ಭೂಮಿಕಾ ವಿದ್ಯಾರ್ಥಿನಿ ರಾಯಭಾರಿ ಕಚೇರಿ ಸಂಪರ್ಕದಲ್ಲಿದ್ದು ಆದಷ್ಟು ಶೀಘ್ರ ತಾಯ್ನಾಡಿಗೆ ಸೇರಿಕೊಳ್ಳುವ ಭರವಸೆ ವ್ಯಕ್ತವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada