* ಅರ್ಜಿರ್ಣದಿಂದ ಬಳಲುತ್ತಿರುವವರು ಒಂದು ಕಪ್ ಮೊಸರಿಗೆ ಕಾಳು ಮೆಣಸಿನ ಪುಡಿ, ಸ್ವಲ್ಪ ಜೀರಿಗೆ ಪುಡಿ ಬೆರೆಸಿ ಸ್ವಲ್ಪ ಸೈಂಧವ ಲವಣವನ್ನು ಮಿಶ್ರ ಮಾಡಿ ಸೇವಿಸುತ್ತಿದ್ದರೆ ಅಜೀರ್ಣ ದೂರವಾಗುತ್ತದೆ.
* ಮೊಸರು ಮುಪ್ಪನ್ನು ಮುಂದೂಡಿ ಯೌವ್ವನವನ್ನು ರಕ್ಷಿಸುತ್ತದೆ.
* ಮೊಸರಿನಲ್ಲಿರುವ ಕ್ಯಾಲ್ಸಿಯಂ, ಮೊಳೆಗಳ ಬೆಳವಣಿಗೆಗೆ ಪೂರಕವಾಗಿದೆ.
* ಭೇದಿ, ಮಲಬದ್ಧತೆ, ನಿದ್ರಾಹೀನತೆ ಮುಂತಾದ ದಿನನಿತ್ಯದ ರೋಗಗಳಿಗೆ ರಾಮಬಾಣವಾಗಿದೆ.
* ಕಾಮಾಲೆ ರೋಗಕ್ಕೂ ಮೊಸರು ಅತ್ಯಂತ ಪರಿಣಾಮಕಾರಿಯಾಗಿದೆ.
* ನಿತ್ಯ ಮಾತ್ರೆ ಸೇವಿಸುವವರು ಮಜ್ಜಿಗೆಯಲ್ಲಿ ಮಾತ್ರೆಗಳನ್ನು ತೆಗೆದುಕೊಂಡರೆ ಉತ್ತಮ ಪರಿಣಾಮ ದೊರೆಯುತ್ತದೆ.
* ಹಳೆ ಮೊಸರಿಗೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ತೆಲೆಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ನಂತರ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಹೀಗೆ 15 ದಿನದವರೆಗೆ ಮಾಡಬೇಕು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada