ರಾಯಚೂರು : ಸಿರವಾರ ತಾಲ್ಲೂಕಿನ ಅರಣ್ಯ ವಲಯಾಧಿಕಾರಿ ಎಂದ ರಾಜೇಶ್ ನಾಯಕ್ ಅವರ ವರ್ಗಾವಣೆ ತಡೆ ಹಿಡಿಯಬೇಕು ಇಲ್ಲದಿದ್ದಲ್ಲಿ ಸರ್ವಪಕ್ಷಗಳು ಹಾಗೂ ರೈತ ಮುಖಂಡರು ಸುದ್ದಿಗೋಷ್ಠಿ ನಡೆಸಿ ಸರಕಾರಕ್ಕೆ ಹಾಗೂ ಅರಣ್ಯ ಮೇಲಧಿಕಾರಿಗಳಿಗೆ ಉಗ್ರವಾದ ಹೋರಾಟದಾ ಎಚ್ಚರಿಕೆ ನೀಡಲಾಯಿತು.
ತದ ನಂತರ ಮಾತನಾಡಿದ ಜೆಡಿಎಸ್ ಮುಖಂಡ ಜಿ ಲೋಕ ರೆಡ್ಡಿ ಅವರು ನಮ್ಮ ಮಾನ್ವಿ ಮತ್ತು ಸಿರವಾರ ತಾಲ್ಲೂಕಿನಲ್ಲಿ ಹಸಿರು ಕ್ರಾಂತಿಯ ಹರಿಕಾರ ಅಂದರೆ ರಾಜೇಶ್ ನಾಯಕ್ ರವರು ಅಂತಹ ಕೆಲಸಗಳನ್ನು ಮಾಡಿದ್ದು ಇನ್ನೂ ಮಾಡುತ್ತಿದ್ದು, ಏಕಾಏಕಿ ವರ್ಗಾವಣೆ ಮಾಡಿದ್ದು ಇದರಲ್ಲಿ ಪಿತೂರಿ ಯಾರದೇನು ತಿಳಿಯದಂತಾಗಿದೆ . ಇಲ್ಲಿ ನಾವು ಸುದ್ದಿಗೋಷ್ಠಿ ಮಾಡುತ್ತಿದ್ದು ಸರ್ವ ಪಕ್ಷ ದಿಂದ ಹಾಗೂ ರೈತ ಸಂಘಟನೆಗಳು ದಲಿತ ಸಂಘಟನೆಗಳಿಂದ ಒಗ್ಗೂಡಿ ವರ್ಗಾವಣೆ ಆದೇಶ ಪ್ರತಿ ಹಿಂಪಡೆಯದಿದ್ದಲ್ಲಿ ಸರ್ಕಾರದ ವಿರುದ್ಧ ಹಾಗೂ ಅರಣ್ಯಾ ಮೇಲಧಿಕಾರಿಗಳ ವಿರುದ್ಧ ಉಗ್ರವಾದ ಹೋರಾಟ ಮಾಡುತ್ತೇವೆ . ಹಾಗೂ ನ್ಯಾಯ ಬರುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada