ಜಮ್ಮು: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಬಿಜೆಪಿಗೆ ಪರ್ಯಾಯ ಪಕ್ಷ ಅಲ್ಲ. ಭವಿಷ್ಯದಲ್ಲಿ ಪಂಜಾಬ್ಗೆ ಬಿಜೆಪಿಯೇ ಏಕೈಕ ಆಯ್ಕೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದಲ್ಲಿ ಹೊಸ ರಾಜಕೀಯ ಸಂಸ್ಕೃತಿಯನ್ನು ತಂದಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಪಿಎಂ ಮೋದಿ ಅವರ ಹೊಸ ರಾಜಕೀಯ ಸಂಸ್ಕೃತಿಯು 50-60 ವರ್ಷಗಳ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಸೃಷ್ಟಿಯಾಗಿದ್ದ ‘ಆಡಳಿತ ವಿರೋಧಿ’ ಎಂಬ ಪೀಡೆಯನ್ನು ತೊಡೆದುಹಾಕಿದ್ದಾರೆ. ಜಾತಿ, ಧರ್ಮ, ನಂಬಿಕೆಗಳ ಆಧಾರದಲ್ಲಿ ಚುನಾವಣೆ ಗೆಲ್ಲುವುದು ಸಾಮಾನ್ಯವಾಗಿತ್ತು. ಆದರೆ ಮೋದಿ ಅವರು ಇಂತಹ ವ್ಯವಸ್ಥೆಯನ್ನು ಬದಲಿಸಿದ್ದಾರೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಗೆದ್ದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ, ನಾನು ಇಂದೇ ಭವಿಷ್ಯ ನುಡಿಯುತ್ತೇನೆ. ಭವಿಷ್ಯದಲ್ಲಿ ಪಂಜಾಬ್ಗೆ ಮತ್ತು ಅಲ್ಲಿನ ಜನರಿಗೆ ಬಿಜೆಪಿಯೇ ಏಕೈಕ ಆಯ್ಕೆಯಾಗಲಿದೆ. ಎಎಪಿ ಬಿಜೆಪಿಗೆ ಪರ್ಯಾಯವಾಗುವುದಿಲ್ಲ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada