ನಂಜನಗೂಡು: ರಾಜವಂಶಸ್ಥ ಯದುವೀರ್ ಇಂದು ಕುಟುಂಬ ಸಮೇತ ನಂಜನಗೂಡಿನ ನಂಜುಂಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್,ಪತ್ನಿ ರಿಷಿಕಾ ಯದುವೀರ್ ಹಾಗೂ ಪುತ್ರ ಆದ್ಯವೀರ್ ಜೊತೆ ಆಗಮಿಸಿ ನಂಜುಂಡನ ದರುಶನ ಪಡೆದರು.ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿದ್ದು ಅನ್ನದಾತನಿಗೆ ಶುಭ ಕೋರಿ ಪೂಜೆ ಸಲ್ಲಿಸಿದರು.ಸುಮಾರು ಅರ್ಧಗಂಟೆಗಳ ಕಾಲ ಗರ್ಭಗುಡಿ ಮುಂದೆ ಕುಳಿತ ಕುಟುಂಬ ರಾಜ್ಯದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಸುಮಾರು 2ಗಂಟೆಗಳಿಗೂ ಹೆಚ್ಚು ಕಾಲ ದೇವಾಲಯದ ಸುತ್ತ ಪ್ರದರ್ಶನ ಮಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada