ಪತ್ರಿಕಾ ಗೋಷ್ಠಿಯಲ್ಲಿ ಸಮಾಜ ಸೇವಕ ಶರಣಪ್ಪ ಗುಂಗಾಡಿ ಆರೋಪ.
ಕ್ಷೇತ್ರ ಹಿಂದುಳಿದ ಹಣೆ ಪಟ್ಟಿಗೆ ಬೇಸರ.
ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳು ಅಭಿವೃದ್ಧಿಯಾದಂತೆ ಯಲಬುರ್ಗಾ ಅಭಿವೃದ್ದಿಯಲ್ಲಿ ಕುಂಠಿತ.
ಎಲ್ಲವೂ ನನ್ನಿಂದಲೇ ಅಭಿವೃದ್ಧಿಯಾಗಿದೆ ಎನ್ನುವುದು ಹಾಸ್ಯಾಸ್ಪದ.
ಯಾರೇ ಜನ ಪ್ರತಿನಿಧಿಯಾದವರು ಕ್ಷೇತ್ರಕ್ಕೆ ರಸ್ತೆ, ಕುಡಿಯುವ ನೀರು, ಶಾಲಾ-ಕಾಲೇಜು ಕಟ್ಟಡಗಳನ್ನು ನಿರ್ಮಾಣ ಮಾಡುವುದು ಸರ್ವೇ ಸಾಮಾನ್ಯ.
ಕ್ಷೇತ್ರಕ್ಕೆ ನೀರಾವರಿ ತರುತ್ತೇವೆ ಎಂದು ಹೇಳಿಕೊಂಡು ಚುನಾವಣಾ ಪೂರ್ವದಲ್ಲಿ ಓಡಾಡುವ ಮಾಜಿ ಸಚಿವ ಬಸವರಾಜ ರಾಯರಡ್ಡಿ ಹಾಗೂ ಹಾಲಿ ಸಚಿವ ಹಾಲಪ್ಪ ಆಚಾರ ರು ಕ್ಷೇತ್ರದ ಜನರನ್ನು ವಂಚಿಸಿದ್ದಾರೆ.
ಕೇವಲ ಎರಡು ಅವಧಿಗೆ ಶಾಸಕರಾದ ಶಿವರಾಜ ತಂಗಡಗಿ ಹಾಗೂ ರಾಘವೇಂದ್ರ ಹಿಟ್ನಾಳ ತಮ್ಮ ಕ್ಷೇತ್ರಗಳಲ್ಲಿನ ಕೆರೆಗಳನ್ನು ತುಂಬಿಸಲಿಲ್ಲವೇ?
ಹಿರಿಯ ಹಾಗೂ ನಾನೇ ಜ್ಞಾನಿ ಎಂದುಕೊಳ್ಳುವ ರಾಯರಡ್ಡಿ ಯಾಕೆ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಿಲ್ಲ.
ಬಸವರಾಜ ರಾಯರಡ್ಡಿ ಮತ್ತು ಹಾಲಪ್ಪ ಆಚಾರ ಗೆ ಅನ್ನದಾತರು ಅಭಿವೃದ್ಧಿ ಹೊಂದುವುದು ಬೇಕಾಗಿಲ್ಲ ಎಂದ ಶರಣಪ್ಪ ಗುಂಗಾಡಿ.
ನೀರಾವರಿಯನ್ನು ಬಂಡವಾಳವಾಗಿ ಮಾಡಿಕೊಂಡ ಇಬ್ಬರೂ ನಾಯಕ ನಿಲುವಿನ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಗುಂಗಾಡಿ.
ಜನರ ಮುಂದೆ ಹೋಗಿ ಮಾತನಾಡಲು ಕಾರಣವಿಲ್ಲದ ರಾಯರಡ್ಡಿ ಚಿಂತನ ಮಂಥನ ಕಾರ್ಯಕ್ರಮದ ನೆಪ. ಇನ್ಮುಂದೆ ಕ್ಷೇತ್ರದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಮತ್ತು ನೀರಾವರಿ ನಾಟಕ ನಡೆಯೋದಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: