ಯಳಂದೂರು ತಾಲ್ಲೂಕಿನ ಚಂಗಚಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಯಿಂದ ರಸ್ತೆಗಳು ಹದಗೆಡುತ್ತಿವೆ ಎಂದು ಗ್ರಾಮಸ್ಥರು ಆರೋಪ ಮಾಡಿದರು….ನಮ್ಮ ಗ್ರಾಮದಲ್ಲಿ ಮನೆಗಳಿಗೆ ಜೆ ಜೆ ಎಂ ವತಿಯಿಂದ ನಲ್ಲಿ ಸಂಪರ್ಕ ಕಲ್ಪಿಸುತ್ತಿರುವುದು ಖುಷಿಯ ವಿಷಯ. ಆದರೆ ಮೀಟರ್ ಅಳವಡಿಸಿ ಶುಲ್ಕ ಕಟ್ಟಬೇಕು ಎಂಬುದು ಖಂಡನಿಯ ಎಂದರು….ಚಂಗಚಹಳ್ಳಿ ಗ್ರಾಮದಲ್ಲಿ ಜೆ ಜೆ ಎಂ ಕಾಮಗಾರಿಯನ್ನು ಎಸ್ಟಿಮೇಟ್ ಪ್ರಕಾರ ಮಾಡುತ್ತಿಲ್ಲ, ಹಳ್ಳ ತೆಗೆದ ಮೇಲೆ ಸಿಮೆಂಟ್ ನಿಂದ ಮುಚ್ಚಬೇಕು ಹಾಗೆ ಬಿಟ್ಟಿದ್ದಾರೆ. ಇಂಜಿನಿಯರ್ ಹಾಗೂ ಗುತ್ತಿಗೆದಾರರು ಹತ್ತಿರಕ್ಕೆ ಬಂದಿಲ್ಲ. ಕಾರ್ಮಿಕರು ತಮಗೆ ಇಷ್ಟ ಬಂದಂತೆ ಕೆಲಸ ಮುಗಿಸಿ ಹೋಗುತ್ತಾರೆ ಎಂದು ಗ್ರಾಮದ ನಾಗೇಂದ್ರ ಆರೋಪಿಸಿದರು…..ಗುಣಮಟ್ಟದ ಕೆಲಸ ಮಾಡಿ ಇಲ್ಲಾವಾದರೆ ವಾಪಸ್ಸು ಹೋಗಿ ಎಂದು ಗ್ರಾಮಸ್ಥರು ಮಾಧ್ಯಮದ ಮೂಲಕ ತಿಳಿಸಿದರು…..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…