ಕ್ರಿಕೆಟಿಗ ರಿಷಬ್ ಪಂತ್ ಅವರ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಿದ್ದ ಊರ್ವಶಿ ರೌಟೇಲ ಅವರು ಈಗ ಸನ್ನಡತೆಯಿಂದ ನೆಟ್ಟಿಗರ ಮೆಚ್ಚುಗೆ ಪಡೆದಿದೆ. ‘ವಾಲ್ತೇರು ವೀರಯ್ಯ’ ಸಿನಿಮಾ ಸಕ್ಸಸ್ ಮೀಟ್ನಲ್ಲಿ ನಟಿ ಊರ್ವಶಿ ರೌಟೇಲ ಅವರು ಚಿರಂಜೀವಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರೋದು ಅನೇಕರ ಮೆಚ್ಚುಗೆ ಪಡೆದಿದೆ. ಕ್ರಿಕೆಟಿಗ ರಿಷಬ್ ಪಂತ್ ಅವರು ಅಪಘಾತದಲ್ಲಿ ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಷಬ್ ಪಂತ್ ಅವರ ಬಗ್ಗೆ ಆಗಾಗ ಪೋಸ್ಟ್ ಹಾಕುವ ಊರ್ವಶಿ ಈಗಲೂ ಅದೇ ರೀತಿಯಲ್ಲಿ ಏನೋ ಒಂದು ಪೋಸ್ಟ್ ಹಾಕುತ್ತಲೇ ಇರುತ್ತಾರೆ. ರಿಷಬ್ ಪಂತ್ ಅವರು ನನಗೆ ತುಂಬ ಸಲ ಫೋನ್ ಮಾಡಿದ್ದರು ಎಂದು ಊರ್ವಶಿ ಹೇಳಿಕೆ ನೀಡಿದ್ದರು. ಆಗ ರಿಷಬ್ ಅವರು, “ಅಕ್ಕಾ ನನ್ನ ಬಿಟ್ಟು ಬಿಡು” ಎಂದಿದ್ದರು. ಹೀಗೆ ಇವರಿಬ್ಬರ ಮಧ್ಯೆ ಕಣ್ಣಾ ಮುಚ್ಚಾಲೆ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಣ್ಣ ಪುಟ್ಟ ಜಗಳ ನಡೆಯುತ್ತಲೇ ಇರುತ್ತದೆ.’ಮೆಗಾಸ್ಟಾರ್’ ಚಿರಂಜೀವಿ ನಟನೆಯ 300 ಕೋಟಿ ಬಜೆಟ್ನ ‘ವಾಲ್ತೇರು ವೀರಯ್ಯ’ ಚಿತ್ರ ಇನ್ನೇನು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಆಗಲಿದೆ. ಈ ಚಿತ್ರದಲ್ಲಿ ಊರ್ವಶಿ ರೌಟೇಲ ಕೂಡ ನಟಿಸಿದ್ದಾರೆ. ಚಿರಂಜೀವಿ, ಊರ್ವಶಿಯನ್ನು ತೆರೆ ಮೇಲೆ ನೋಡಿದವರು ಹಣವನ್ನು ಕೂಡ ಎಸೆದಿದ್ದಾರೆ. ಸಕ್ಸಸ್ ಮೀಟ್ನಲ್ಲಿ ಊರ್ವಶಿ ಅವರ ಡ್ಯಾನ್ಸ್, ನಟನೆ ಎಲ್ಲವನ್ನು ಚಿರಂಜೀವಿ ಹೊಗಳಿದ್ದರು. ಅದನ್ನು ಕೇಳಿದ ಊರ್ವಶಿ ಅವರು ಮೆಗಾಸ್ಟಾರ್ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ಅದನ್ನು ನೋಡಿ ನೆಟ್ಟಿಗರು ಖುಷ್ ಆಗಿದ್ದಾರೆ. ಕೆಂಪು ಬಣ್ಣದ ಸೀರೆಯಲ್ಲಿ ಸಾಂಪ್ರದಾಯಿಕವಾಗಿ ಊರ್ವಶಿ ಮಿರಿ ಮಿರಿ ಮಿಂಚುತ್ತಿದ್ದರು.
https://play.google.com/store/apps/details?id=com.speed.newskannada