ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮೋರಿಯನ್ನು ಕ್ಲೀನ್ ಮಾಡಲು ಕಲ್ಲು ತೆಗೆದಾಗ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮೃತದೇಹದ ಸ್ಯಾಂಪಲ್ ಪಡೆದು ಡಿಎನ್ ಎ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಕಳೆದ 4ವರ್ಷದ ಹಿಂದೆ ಬಿಬಿಎಂಪಿ ಮೋರಿ ಕಾಮಗಾರಿ ನಡೆಯಿತು. ಅಂದು ಕಾಮಗಾರಿ ವೇಳೆ ಕೊಲೆ ಮಾಡಿ ಹೂತು ಹಾಕಿರುವ ಶಂಕೆ ವ್ಯೇಕ್ತವಾಗಿದೆ. 4ವರ್ಷದ ಇಚೇಗೆ ಮಿಸ್ಸಿಂಗ್ ಕಂಪ್ಲೇಂಟ್ ನಲ್ಲಿ ಪತ್ತೆಯಾಗದ ವ್ಯಕ್ತಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳಿಗೆ ಫೋಟೋಸ್ ರವಾನೆ ಮಾಡಲಾಗಿದೆ. ಮೃತ ವ್ಯಕ್ತಿಯ ಚಹರೆ ಹೋಲುತದೆ ಎಂದು ತಿಳಿದು ಬಂದರೆ ತನಿಖೆ ನಡೆಸಲಾಗುವುದು . ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲು ತಂಡವನ್ನು ರಚನೆ ಮಾಡಲಾಗಿದೆ.
ಇದನ್ನೂ ಓದಿ:ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯ ಬಂಧನ