“ಮನಸಾಗಿದೆ” ಚಿತ್ರದಿಂದ ಪಾದಾರ್ಪಣೆ ಮಾಡಿದ್ದ ಯುವ ನಟ ಅಭಯ್ ಈಗ “ಮಂಡ್ಯ ಹೈದ” ನಾಗಿದ್ದಾರೆ. ಅಭಯ್ ತಂದೆ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು ವಿ. ಶ್ರೀಕಾಂತ್ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಮುಂದಿನವಾರ ಚಿತ್ರದ ಮುಹೂರ್ತ ನಡೆಯಲಿದ್ದು ಶೀರ್ಷಿಕೆ ಬಿಡುಗಡೆಯಾಗಿದೆ.ನಿರ್ಮಾಪಕ ಚಂದ್ರಶೇಖರ್ ಮಾತನಾಡಿ, ಮುಹೂರ್ತ ನಡೆಸಿ ಅಂದಿನಿಂದಲೇ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ, ಕಿರುತೆರೆ ನಟಿ ಭೂಮಿಕಾ ಅವರನ್ನು ನಾಯಕಿಯಾಗಿ ಪರಿಚಯಿಸುತ್ತೇವೆ ಎನ್ನುವ ವಿವರ ನೀಡಿದರು.ನಿರ್ದೇಶಕ ಶ್ರೀಕಾಂತ್ ಮಾತನಾಡಿ, ಮಂಡ್ಯ ಹೈದನ ಲವ್ ಯಾವ ಥರ ಇರಲಿದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಿದ್ದೇವೆ.ಚಿತ್ರದ ಶೇ.80 ರಷ್ಟು ಚಿತ್ರೀಕರಣ ಮಂಡ್ಯ ,ಸುತ್ತಮುತ್ತಲ ಪ್ರದೇಶ, ಶೇ.20ರಷ್ಟು ಭಾಗ ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುತ್ತಿದ್ದೇವೆ. ಪ್ರೀತಿಗೋಸ್ಕರ ಪ್ರಾಣ ತೆಗೀತಾರೆ, ಕೆಲವರು ಪ್ರಾಣ ಕೊಡುತ್ತಾರೆ, ನಾಯಕ ಪ್ರೀತಿಗಾಗಿ ಪ್ರಾಣ ಕೊಡ್ತಾನಾ,ಪ್ರಾಣ ತೆಗೀತಾನಾ ಎನ್ನುವುದು ಚಿತ್ರದ ಒಂದು ಸಾಲಿನ ಥೆ ಎಂದರು.ನಾಯಕ ಅಭಯ್,ಚಿತ್ರದ ಕಥೆ ಇಷ್ಟವಾಗಿದೆ. ಪಕ್ಕಾ ಮಂಡ್ಯ ಭಾಷೆ ಚಿತ್ರದಲ್ಲಿರಲಿದೆ.ಸಹೋದರ ತೇಜಸ್ ಚಿತ್ರದ ಪ್ರೊಡಕ್ಷನ್ ಕೆಲಸದಲ್ಲಿ ಭಾಗಿಯಾಗಲಿದ್ದಾನೆ ಎಂದು ಹೇಳಿದರು.ನಾಯಕಿ ಭೂಮಿಕಾ , ಗೀತಾ ಪುಟ್ಟಕ್ಕನ ಮಕ್ಕಳು ಧಾರಾವಾಹಿಗಳು ಹಾಗು ರಾಬರ್ಟ್, ಬ್ರಹ್ಮಚಾರಿ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಮೊದಲ ಬಾರಿಗೆ ನಾಯಕಿ ಎನ್ನುವ ವಿವರ ನೀಡಿದರು. ಸುರೇಂದ್ರನಾಥ್ ಸಂಗೀತ , ಮಾಡುತ್ತಿದ್ದಾರೆ. ಮನುಗೌಡ ಛಾಯಾಗ್ರಹಣವಿದೆ.
https://play.google.com/store/apps/details?id=com.speed.newskannada