ಮಗುವಿನ ಮನಸ್ಸು ಬಿಳಿ ಹಾಳೆ ಥರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಗುಡಾಳ
ಬೀದರ್ ಜಿಲ್ಲೆ ಚಿಟಗುಪ್ಪ ಪಟ್ಟಣದಲ್ಲಿ ಇಂದು ಕನ್ಯಾ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಚಿಟ್ಗುಪ್ಪ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಮಗುವಿನ ಮನಸ್ಸು ಬಿಳಿ ಹಾಳೆ ಥರ ಶಿಕ್ಷಕರು ಒಳ್ಳೆ ಗುಣಮಟ್ಟದ ಶಿಕ್ಷಣ ಕೊಡಬೇಕು ಮಕ್ಕಳಿಗೆ ತನ್ನ ಸುತ್ತಮುತ್ತಲಿನ ಪರಿಸರದ ಬಗ್ಗೆ ಗ್ರಾಮ ವ್ಯವಸ್ತೆ.ಬಗ್ಗೆ ಗ್ರಾಮ ನಕ್ಷೆ.ಸಸ್ಯಗಳ ಬಗ್ಗೆ ಮರಗಿಡಗಳ. ಪ್ರಾಣಿ ಪಕ್ಷಿಗಳ. ಬಗ್ಗೆ ವಿವರವಾಗಿ ತಿಳಿಸಬೇಕು ದೈಹಿಕ.ಮಾನಸಿಕ. ನೈತಿಕ.ವಿಕಾಸ ಹೊಂದಲು ಅನುಕೂಲವಾಗುತ್ತದೆ.
ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನುಡಿದರು
ಸಭೆಯಲ್ಲಿ ತಾಲೂಕ ಕ್ಷೇತ್ರ ಸಮನ್ವಯಾಧಿಕಾರಿ ಪ್ರೀತಮ್ ಸಿಂಗ್ ಜಾದವ್. ಬಿಸಿ ಊಟ ಅಧಿಕಾರಿ ಸಂಜು ಕಾಗೆ. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ. ಸರ್ಕಾರಿ ನೌಕರ ಸಂಘದ ತಾಲೂಕ ಅಧ್ಯಕ್ಷ ರಾಜಕುಮಾರ್ ಬೇಲೂರೆ. ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ರಾಜಪ್ಪ ಜಮಾದಾರ್. ಹಾಗೂ ಸಭೆಯ ಅಧ್ಯಕ್ಷತೆ ಸರುಬಾಯಿ ಪವಾರ್ ಇನ್ನು ಮುಂತಾದವರು ಹಾಜರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada