ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಹಲವು ದಶಕಗಳಿಂದ ದೇವಸ್ಥಾನಕ್ಕೆ ಪ್ರವೇಶನಿರಾಕರಿಸಲಾಗಿದ್ದ ಅಲ್ಲಿನ ಪರಿಶಿಷ್ಟ ಜಾತಿಯ ೩೦೦ ಕ್ಕೂ ಹೆಚ್ಚು ಜನರನ್ನು ಇಂದು ಜಿಲ್ಲಾಡಳಿತವು ದೇವಾಲಯಕ್ಕೆ ಪೂಜೆಗೆ ಕರೆದೊಯ್ದಿದೆ.
ಪೋಷಕ-ಶಿಕ್ಷಕರ ಸಮಾವೇಶದ ಸಂದರ್ಭದಲ್ಲಿ ಈ ವಿಷಯವು ಬೆಳಕಿಗೆ ಬಂದಿತ್ತು. ಈ ಬಗ್ಗೆ ಆ ಪ್ರದೇಶದ ಪ್ರಬಲ ಸಮುದಾಯಗಳೊಂದಿಗಿನ ಸಭೆಗಳನ್ನು ನಡೆಸಿದ ನಂತರ ಈ ಐತಿಹಾಸಿಕ ಕಾರ್ಯ ನಡೆದಿದೆ. ಆದಾಗ್ಯೂ, ಗ್ರಾಮದಲ್ಲಿ ೧೨ ಪ್ರಬಲ ಗುಂಪುಗಳ ತೀವ್ರ ವಿರೋಧದಿಂದಾಗಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವಸ್ಥಾನದ ಹೊರಗೆ ಭಾರೀ ಪೊಲೀಸ್ ನಿಯೋಜಿಸಲಾಗಿದೆ.
ತೆನ್ಮುಡಿಯನೂರು ಗ್ರಾಮದಲ್ಲಿ ಸುಮಾರು ೫೦೦ ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ೮೦ ವರ್ಷಗಳಿಂದ ೨೦೦ ವರ್ಷಗಳಷ್ಟು ಹಳೆಯ ದೇವಾಲಯಕ್ಕೆ ಸಮುದಾಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು.,ದಶಕಗಳ ಹಿಂದೆಯೇ ಸಮುದಾಯಗಳು ವಿವಿಧ ದೇವಾಲಯಗಳಲ್ಲಿ ಪ್ರಾರ್ಥನೆ ಮಾಡಲು ಒಪ್ಪಿಕೊಂಡಿವೆ. ಅದರಲ್ಲಿ ಯಾವತ್ತೂ ಬದಲಾವಣೆ ಆಗಿಯೇ ಇಲ್ಲ ಎಂದು ಇಲ್ಲಿನ ಪ್ರಬಲ ಸಮುದಾಯಗಳು ಹೇಳಿವೆ. ಪ್ರಬಲ ಸಮುದಾಯಗಳ ೭೫೦ ಕ್ಕೂ ಹೆಚ್ಚು ಜನರು ಈ ಕ್ರಮವನ್ನು ಪ್ರತಿಭಟಿಸಿದ್ದು, ದೇವಾಲಯವನ್ನು ಸೀಲ್ ಮಾಡಲು ಒತ್ತಾಯಿಸುತ್ತಿರುವುದರಿಂದ ದೇವಾಲಯದ ಹೊರಗೆ ಭಾರೀ ಪೊಲೀಸ್ ನಿಯೋಜನೆ ಇದೆ.
https://play.google.com/store/apps/details?id=com.speed.newskannada