ಕೆಜಿಎಫ್ ಮುಗಿದ ಮೇಲೆ ನಿದೇರ್ಶಕ ಪ್ರಶಾಂತ್ ನೀಲ್ ಜೊತೆ ಪ್ರಭಾಸ್ ಸಲಾರ್ ಚಿತ್ರವನ್ನು ಮಾಡ್ತಿದ್ದಾರೆ. ಈ ಕಡೆ ಯಶ್ ಹೊಸ ಚಿತ್ರಕ್ಕೆ ಸಜ್ಜಾಗ್ತಿದ್ದಾರೆ. ಸದ್ಯಕ್ಕೆ ಮೂವರಿಗೂ ಕನೆಕ್ಷನ್ನೇ ಇಲ್ಲ. ಆದ್ರೀಗ, ಯಶ್, ನೀಲ್ ಮತ್ತು ಪ್ರಭಾಸ್ ಬಗ್ಗೆ ಹಳೆ ಸುದ್ದಿ ಮತ್ತೆ ಸದ್ದು ಮಾಡ್ತಿದೆ.
ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿದ ತಕ್ಷಣ ತೆಲುಗು ನಟ ಪ್ರಭಾಸ್ ಜೊತೆ ಪ್ರಶಾಂತ್ ನೀಲ್, ಸಲಾರ್ ಅಂತ ಸಿನಿಮಾ ಅನೌನ್ಸ್ ಮಾಡಿದ್ರು. ಕೆಜಿಎಫ್ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲಂಸ್ ಅವರೇ ಈ ಚಿತ್ರಕ್ಕೂ ಬಂಡವಾಳ ಹಾಕಿದ್ದು, ಹೈದರಾಬಾದ್ನಲ್ಲಿ ಗ್ರ್ಯಾಂಡ್ ಆಗಿ ಸಿನಿಮಾ ಲಾಂಚ್ ಆಯ್ತು.
ಸಲಾರ್ ಲಾಂಚ್ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಅತಿಥಿಯಾಗಿ ಹೋಗಿದ್ರು. ಅದ್ಯಾವಾಗ ಸಲಾರ್ ಇವೆಂಟ್ನಲ್ಲಿ ಈ ಮೂವರು ಒಟ್ಟಿಗೆ ಕಾಣಿಸಿಕೊಂಡ್ರೋ ಆಗಲೇ ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೆಟ್ ಆಗಿತ್ತು. ಒಂದು ಕ್ರೇಜಿ ಕಾಂಬಿನೇಷನ್ನ ಸುಳಿವು ಸಿಕ್ಕಿತ್ತು. ಯಾರೂ ಎಕ್ಸ್ಪೆಕ್ಟೇ ಮಾಡದೇ ಇರೋ ಸುದ್ದಿಯೊಂದು ಜೀವ ಪಡೆದುಕೊಂಡಿತ್ತು. ಈ ಸುದ್ದಿಗೆ ಮತ್ತೆ ಜೀವ ಬಂದಿದ್ದು ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ್ಮೇಲೆ. ಕೆಜಿಎಫ್ ಎರಡನೇ ಅಧ್ಯಾಯ ನೋಡಿ ಹೊರಗೆ ಬಂದ ಪ್ರೇಕ್ಷಕ ಮೂರನೇ ಭಾಗದ ಕಥೆ ಊಹಿಸೋಕೆ ಶುರು ಮಾಡಿದ್ರು. ರಾಕಿ ಭಾಯ್ ಮತ್ತೆ ಬರ್ತಾನೆ. ಅವನ ಕಥೆ ಮತ್ತೆ ಮುಂದುಯವರಿಯುತ್ತೆ ಅನ್ನೋ ಚರ್ಚೆಗಳು ಮಾತಾಡೋಕೆ ಶುರು ಮಾಡಿದ್ರು.
https://play.google.com/store/apps/details?id=com.speed.newskannada