ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ ಮುಂಬರುವ ಚಿತ್ರ ‘ಆಚಾರ್ಯ ಆಗಿದ್ದು, ಅಭಿಮಾನಿಗಳು ತಂದೆ ಚಿರಂಜೀವಿ ಮತ್ತು ಅವರ ಮಗ ಹಾಗೂ ನಟ ರಾಮ್ ಚರಣ್ ಅವರನ್ನು ಒಟ್ಟಿಗೆ ಒಂದೇ ಸಿನೆಮಾದಲ್ಲಿ ನೋಡಲು ತುಂಬಾನೇ ಕುತೂಹಲದಿಂದ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.ತಮ್ಮ ತಂದೆ, ನಟ ಚಿರಂಜೀವಿ ಅವರೊಂದಿಗೆ ಕೆಲಸ ಮಾಡುವುದು ಚಿತ್ರದ ನಿರ್ದೇಶಕ ಕೊರಟಾಲ ಶಿವ ತೆಗೆದುಕೊಂಡ ನಿರ್ಧಾರ ಎಂದು ನಟ ರಾಮ್ ಚರಣ್ ಇದೀಗ ಬಹಿರಂಗಪಡಿಸಿದ್ದಾರೆ. ಹೊಸ ಸಂದರ್ಶನವೊಂದರಲ್ಲಿ, ಅವರು ಚಿತ್ರದ ಸಹ ನಿರ್ಮಾಪಕ ಎಂಬ ಕಾರಣಕ್ಕಾಗಿ ಆಚಾರ್ಯ ಚಿತ್ರದಲ್ಲಿ ನಟಿಸಲು ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಿರಂಜೀವಿ ಅವರಂತೆಯೇ ಅದೇ ಚಿತ್ರದ ಭಾಗವಾಗಿರುವುದು ಅವರ ತಾಯಿಗೆ ಬಹಳಷ್ಟು ಸಂತೋಷ ತಂದಿದೆ ಎಂದು ಅವರು ಹೇಳಿದರು.ಈ ಹಿಂದೆ ಚಿರಂಜೀವಿ ಮತ್ತು ರಾಮ್ ಚರಣ್ ತೆಲುಗು ಚಿತ್ರ ಬ್ರೂಸ್ ಲೀ: ದಿ ಫೈಟರ್ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆದಾಗ್ಯೂ, ಅವರು ಚಿತ್ರದಲ್ಲಿ ತುಂಬಾ ದೊಡ್ಡ ಪಾತ್ರವನ್ನು ಜೊತೆಯಾಗಿ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಅವರು ಪೂರ್ಣ ಪ್ರಮಾಣದ ಪಾತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಮನೋರಂಜನಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಟ ರಾಮ್ ಚರಣ್ ಅವರು “ಚಿತ್ರದಲ್ಲಿ ನನ್ನ ತಂದೆ ಅಭಿನಯಿಸಿದ್ದು ನನ್ನ ನಿರ್ಧಾರವಾಗಿರಲಿಲ್ಲ. ಹೌದು, ನಾನು ಅದರಲ್ಲಿ ಭಾಗಶಃ ನಿರ್ಮಾಪಕನಾಗಿದ್ದೇನೆ. ಆದರೆ, ಆರಂಭದಲ್ಲಿ ನಮಗೆ ಅನೇಕ ಆಯ್ಕೆಗಳಿದ್ದವು” ಎಂದು ಹೇಳಿದರು.”ನಮ್ಮ ನಿರ್ದೇಶಕ ಕೊರಟಾಲಾ ಶಿವ ಅವರು ಒಂದು ದಿನ ನನಗೆ ಕರೆ ಮಾಡಿ, ‘ನೀವು ಆರ್ಆರ್ಆರ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಮ್ಮ ಆಚಾರ್ಯ ಚಿತ್ರಕ್ಕಾಗಿ ಆರ್ಆರ್ಆರ್ ಚಿತ್ರದಿಂದ ಸಮಯ ಕೇಳಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ, ಆದರೆ ಸ್ಕ್ರಿಪ್ಟ್ ಅವಶ್ಯಕತೆಗೆ ನಾನು ನಿಮ್ಮನ್ನು ಮೀರಿ ಆ ಪಾತ್ರಕ್ಕೆ ಯೋಚಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಅವರು “ನಾವಿಬ್ಬರೂ ಎಂದರೆ ನಟ ಚಿರಂಜೀವಿ ಮತ್ತು ಅವರು ನಿರ್ಧರಿಸಿದಂತೆ ಎಂದು ಹೇಳಿ.. ಬನ್ನಿ ಒಟ್ಟಿಗೆ ಚಲನಚಿತ್ರ ಮಾಡೋಣ. ನಿರ್ದೇಶಕರು ಮತ್ತು ಸ್ಕ್ರಿಪ್ಟ್ ಅದನ್ನು ಒತ್ತಾಯಿಸಿದರು ಎಂದು ನಾನು ಭಾವಿಸುತ್ತೇನೆ ಮತ್ತು ರಾಜಮೌಳಿ ಸರ್ ನನ್ನ ಚಿತ್ರಕ್ಕಾಗಿ ಆರ್ಆರ್ಆರ್ ಚಿತ್ರದ ಚಿತ್ರೀಕರಣದಿಂದ ಸಮಯ ನೀಡಿದರು ಮತ್ತು ಅದು ನಮ್ಮ ಚಿತ್ರಕ್ಕೆ ತುಂಬಾನೇ ಸಹಾಯವಾಯಿತು. ನನಗಿಂತ ಹೆಚ್ಚಾಗಿ, ಇದು ನನ್ನ ತಾಯಿಗೆ ತುಂಬಾನೇ ಖುಷಿ ಕೊಟ್ಟಿದೆ” ಎಂದು ಹೇಳಿದರು.
ವರದಿಗಳ ಪ್ರಕಾರ, ಆಚಾರ್ಯ ಮಧ್ಯವಯಸ್ಕ ನಕ್ಸಲೀಯ ಮತ್ತು ಸಮಾಜ ಸುಧಾರಕನ ಬಗ್ಗೆ ಕಥೆಯನ್ನು ಹೇಳುತ್ತದೆ. ಅವರು ದೇವಾಲಯದ ಹಣ ಮತ್ತು ದೇಣಿಗೆಗಳ ದುರುಪಯೋಗದ ಬಗ್ಗೆ ದತ್ತಿ ಇಲಾಖೆಯ ವಿರುದ್ಧ ಹೋರಾಟವನ್ನು ಪ್ರಾರಂಭಿಸುತ್ತಾರೆ. ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಫೆಬ್ರವರಿಯಲ್ಲಿ ಬಿಡುಗಡೆ ಆಗಬೇಕಿದ್ದ ಚಿತ್ರವು ಈಗ ಏಪ್ರಿಲ್ 29 ರಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಇತ್ತೀಚೆಗೆ ಘೋಷಿಸಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
ವರದಿಗಳ ಪ್ರಕಾರ, ಆಚಾರ್ಯ ಮಧ್ಯವಯಸ್ಕ ನಕ್ಸಲೀಯ ಮತ್ತು ಸಮಾಜ ಸುಧಾರಕನ ಬಗ್ಗೆ ಕಥೆಯನ್ನು ಹೇಳುತ್ತದೆ. ಅವರು ದೇವಾಲಯದ ಹಣ ಮತ್ತು ದೇಣಿಗೆಗಳ ದುರುಪಯೋಗದ ಬಗ್ಗೆ ದತ್ತಿ ಇಲಾಖೆಯ ವಿರುದ್ಧ ಹೋರಾಟವನ್ನು ಪ್ರಾರಂಭಿಸುತ್ತಾರೆ. ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಫೆಬ್ರವರಿಯಲ್ಲಿ ಬಿಡುಗಡೆ ಆಗಬೇಕಿದ್ದ ಚಿತ್ರವು ಈಗ ಏಪ್ರಿಲ್ 29 ರಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಇತ್ತೀಚೆಗೆ ಘೋಷಿಸಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: