ನಿರ್ದೇಶಕರಿಂದಲೇ ನನ್ನ ಸಿನಿಮಾ ಜರ್ನಿ ಹಾಳಾಯ್ತು: ಬಾಲಿವುಡ್​ನ ಮತ್ತೊಂದು ಕರಾಳತೆ ಬಿಚ್ಚಿಟ್ಟ ನಟ ಅಭಯ್​ ಡಿಯೋಲ್​

 

ಮುಂಬೈ: ಬಾಲಿವುಡ್​ನ ಮತ್ತೊಂದು ಕರಾಳ ಮುಖವನ್ನು ನಟ ಹಾಗೂ ನಿರ್ಮಾಪಕ ಅಭಯ್​ ಡಿಯೋಲ್​ ಅವರೇ ಬಿಚ್ಚಿಟ್ಟಿದ್ದಾರೆ. ನಟಿ ಕಂಗನಾ ರಣಾವತ್ ಅವರು ಆಗ್ಗಾಗ್ಗೆ ಬಾಲಿವುಡ್​ ಬಗ್ಗೆ ಕಿಡಿಕಾರಿ ಆರೋಪ ಹೊರಿಸುವುದು ಸಾಮಾನ್ಯ ಆದರೀಗ ಈ ಸಾಲಿಗೆ ಅಭಯ್ ಡಿಯೋಲ್​ ಕೂಡ ಸೇರಿದ್ದಾರೆ.

ನಿರ್ದೇಶಕರ ಬಗ್ಗೆ ನನಗೆ ಗಾಬರಿಯಾಗುತ್ತದೆ. ಜೀವನದಲ್ಲಿ ಮುಂದೆ ಬರಲು ನನ್ನನ್ನು ಹಲವರು ಬಳಸಿಕೊಂಡಿದ್ದಾರೆ. ಇವರಿಂದಲೇ ನನ್ನ ಸಿನಿಮಾ ಜೀವನ ಹಾಳಾಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಒಳ್ಳೆಯತನ ಎಲ್ಲರಿಗೂ ಎಲ್ಲಾ ಸಮಯದಕ್ಕೂ ಒಳ್ಳೆಯದಾಗಿರುವುದಿಲ್ಲ ಎಂಬುದನ್ನು ಕಲಿತಿದ್ದೇನೆ. ಹಿಂದೆ ಆದರ್ಶವನ್ನು ಹೊಂದಿದ್ದೆ ಈಗ ಹಾಗಿಲ್ಲ ಎಂದಿದ್ದಾರೆ.

2005ರಲ್ಲಿ ಇಮ್ತಿಯಾಜ್​ ಅಲಿಯ ಸೋಚ್​ ನಾ ಥಾ ಸಿನಿಮಾ ಮೂಲಕ ಚಿತ್ರಜಗತ್ತಿಗೆ ಕಾಲಿಟ್ಟ ಅಭಯ್​ ಡಿಯೋಲ್​ಗೆ ಹೇಳಿಕೊಳ್ಳುವಷ್ಟು ಯಶಸ್ಸೇನು ಸಿಕ್ಕಿಲ್ಲ. ಇನ್ನು 20 ಸಿನಿಮಾದಲ್ಲಿ ಇವರು ನಟಿಸಿದ್ದಾರೆ.

ಸಂದರ್ಶನವೊಂದರಲ್ಲಿ ಹೇಳಿರುವ ಅವರು, ಪ್ರಾಮಾಣಿಕತೆ ಅತ್ಯುತ್ತಮ ನೀತಿ ಎಂದೇನೂ ಅಲ್ಲ, ನಾನು ಯಾವಾಗಲೂ ನಾನಾಗಿರಲು ಪ್ರಯತ್ನಿಸಿದ್ದೇನೆ. ನಾನು ಕೆಲಸ ಮಾಡಿದ ನಿರ್ದೇಶಕರು ಲಾಭವನ್ನು ಪಡೆದುಕೊಂಡಿದ್ದಾರೆ ಹೊರತು ನನಗೇನು ಅದರಿಂದ ಉಪಯೋಗವಾಗಿಲ್ಲ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊರಗಿನಿಂದ ಟಾಯ್ಲೆಟ್, ಒಳಗೆ ನೋಡಿದ್ರೆ ಬೆಡ್‌ ರೂಂ! ಕೋಟೆನಾಡಲ್ಲಿ ಹೈಟೆಕ್ ವೇಶ್ಯಾವಾಟಿಕೆ!

Sat May 7 , 2022
  ಚಿತ್ರದುರ್ಗ: ಅದು ಕರುನಾಡಿನ ಕೋಟೆ ನಾಡು, ಮದಕರಿ ನಾಯಕರಂತ (Madakari Nayaka) ಶೂರರು ಆಳಿದ ನೆಲ, ಒನಕೆ ಒಬವ್ವನಂತ (Onake Obavva) ವೀರ ಮಹಿಳೆಯರಿಗೆ, ಆದರ್ಶ ನಾರಿಯರಿಗೆ ಜನ್ಮಕೊಟ್ಟ ತವರೂರು. ಆದರೆ ಅಲ್ಲೀಗ ಬಹುದೊಡ್ಡ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ (High-tech prostitution) ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಹೌದು, ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ (Holalkere) ಪಟ್ಟಣದಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಬೆಳಕಿಗೆ ಬಂದಿದೆ. ಮೈಸೂರಿನ ಒಡನಾಡಿ (Odanadi) […]

Advertisement

Wordpress Social Share Plugin powered by Ultimatelysocial