ಸಾಲ ತೀರಿಸು ಅಂತ ಪತ್ರ ಬರೆದು ಮಂಗಳೂರಿನಲ್ಲಿ ಬಿಟೆಕ್ ವಿದ್ಯಾರ್ಥಿ ಆತ್ಮಹತ್ಯೆ

ಸಾಲ ತೀರಿಸು ಅಂತ ಪತ್ರ ಬರೆದು ಮಂಗಳೂರಿನಲ್ಲಿ ಬಿಟೆಕ್ ವಿದ್ಯಾರ್ಥಿ ಆತ್ಮಹತ್ಯೆ; ಮಗನನ್ನು ನೋಡಲು ಹಣವಿಲ್ಲದ ಹೆತ್ತವರು!

ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದ ಬಿಟೆಕ್ ವಿದ್ಯಾರ್ಥಿಯ ಶವ ಮಂಗಳೂರಿನ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಸುರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪತ್ತೆಯಾಗಿದೆ.

ಮೃತನನ್ನು ಬಿಹಾರ ಮೂಲದ ಸೌರವ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ.

ಈತ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿದ್ಯಾಭ್ಯಾಸ ಮಾಡುತ್ತಿದ್ದ.

ಸೌರವ್ ಸಾವಿಗೂ ಮುನ್ನ ತಂದೆಗೆ ಬರೆದಿರುವ ಡೆತ್ ನೋಟ್ ನಲ್ಲಿ 1 ಲಕ್ಷ ರೂ. ಸಾಲ ತೀರಿಸುವಂತೆ ಮನವಿ ಮಾಡಿದ್ದಾನೆ. ಸೌರವ್ ಬ್ಯಾಂಕ್ ಖಾತೆಯಲ್ಲಿ 46,000 ರೂಪಾಯಿ ಇದ್ದು, ಹಣ ಪಾವತಿಸದಿದ್ದರೆ ಬಡ್ಡಿಯನ್ನು ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾನೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ತನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ ಎಂದು ಕೂಡ ಬರೆದಿದ್ದಾನೆ. ಶಿಕ್ಷಣ ಸಾಲ ಪಡೆದು ವಿದ್ಯಾಭ್ಯಾಸ ನಡೆಸುತ್ತಿದ್ದ ಸೌರವ್ ಗೆ ವಿದ್ಯಾಭ್ಯಾಸ ಮುಗಿಸುವ ವೇಳೆಗೆ ಸಾಲದ ಹೊರೆ ಜಾಸ್ತಿಯಾಗಿತ್ತು. ಇದರಿಂದ ಮಾನಸಿಕ ಒತ್ತಡ ಎದುರಿಸುತ್ತಿದ್ದ ಎಂದು ಅವರು ತಿಳಿಸಿದರು.

ಹಾಸ್ಟೆಲ್ ನಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಸ್ನೇಹಿತರು ಸೌರವ್ ನನ್ನು ಉಪಹಾರಕ್ಕೆ ಕರೆಯಲು ಪ್ರಯತ್ನಿಸಿದಾಗ ಆತ ಬಾಗಿಲು ತೆರೆಯಲಿಲ್ಲ. ಬೆಳಿಗ್ಗೆ 9.30 ರ ಸುಮಾರಿಗೆ ಕಿಟಕಿಯ ಮೂಲಕ ಇಣುಕಿ ನೋಡಿದಾಗ ಕೋಣೆಯೊಳಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ.

ಬಡತನದಿಂದ ಮಗನ ಅಂತ್ಯಸಂಸ್ಕಾರಕ್ಕೆ ಬಿಹಾರದಿಂದ ಮಂಗಳೂರಿಗೆ ಬರಲು ಸಾಧ್ಯವಾಗುತ್ತಿಲ್ಲ, ನೀವೇ ಅಂತ್ಯಕ್ರಿಯೆ ನಡೆಸಿ ಎಂದು ಅಧಿಕಾರಿಗಳಿಗೆ ಪೋಷಕರು ಮನವಿ ಮಾಡಿದ್ದರು. ಆದರೆ ಕಾಲೇಜು ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೌರವ್ ಪೋಷಕರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದಾರೆ.

ಪಾರ್ಥಿವ ಶರೀರವನ್ನು ಮನೆಗೆ ಸ್ಥಳಾಂತರಿಸುವ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ. ಸುರತ್ಕಲ್ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ನೀನು ಅಕ್ಷಯ್​ ಕುಮಾರ್​​ನ ಮದ್ವೆ ಆಗ್ತೀಯಾ'; ಟ್ವಿಂಕಲ್​ ಖನ್ನಾ ಕೈ ನೋಡಿ ಭವಿಷ್ಯ ನುಡಿದಿದ್ದ ಜ್ಯೋತಿಷಿ

Sun Dec 26 , 2021
ಜ್ಯೋತಿಷಿ ಒಬ್ಬರು ಟ್ವಿಂಕಲ್​ ಯಾರನ್ನು ಮದುವೆ ಆಗುತ್ತಾರೆ ಎಂಬುದನ್ನು ಹೇಳಿದ್ದರಂತೆ. ಅಚ್ಚರಿ ಎಂದರೆ, ಅಕ್ಷಯ್​ ಎಂದರೆ ಯಾರು ಎಂಬುದೇ ಟ್ವಿಂಕಲ್​ಗೆ ಆಗ ಗೊತ್ತಿರಲಿಲ್ಲ.ಅಕ್ಷಯ್​ ಕುಮಾರ್​ (Akshay Kumar) ಹಾಗೂ ಟ್ವಿಂಕಲ್​ ಖನ್ನಾ (Twinkle Khanna) ಮದುವೆ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಇವರ ಮಧ್ಯೆ ಮನಸ್ತಾಪ ಮೂಡಿದ ಉದಾಹರಣೆ ತುಂಬಾನೇ ಕಡಿಮೆ. ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾ, ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಇವರದ್ದು ಪ್ರೇಮ ವಿವಾಹ. ಅಚ್ಚರಿ ಎಂದರೆ, ಒಬ್ಬರಿಗೊಬ್ಬರು ಪರಿಚಯ […]

Advertisement

Wordpress Social Share Plugin powered by Ultimatelysocial