6 ತಿಂಗಳ ಹಿಂದೆ ಸಾವನ್ನೊಪ್ಪಿದ ಪ್ರೇಮಿಗಳು.

 

ಹಮದಾಬಾದ್‌: ಪ್ರೀತಿ ಪಾತ್ರರು ನಿಧನರಾದ ಬಳಿಕ ಅವರ ಕುಟುಂಬದವರು ಅಥವಾ ಆಪ್ತರು ಅವರ ಪ್ರತಿಮೆ ಮಾಡುವುದುಂಟು. ಆದರೆ, ಗುಜರಾತ್‌ನ ತಪಿ ಜಿಲ್ಲೆಯಲ್ಲಿ ಇಬ್ಬರು ಪ್ರೇಮಿಗಳು ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆ ಜೋಡಿಯ ಕುಟುಂಬ ಸದಸ್ಯರು ಅಸುನೀಗಿರುವ ಯುವಕ ಹಾಗೂ ಯುವತಿಯ ಪುತ್ಥಳಿ ಸ್ಥಾಪನೆ ಮಾಡಿ, ಅದಕ್ಕೆ ವಿವಾಹ ಮಾಡಿದ್ದಾರೆ.

ಗಣೇಶ್‌ ಮತ್ತು ರಂಜನಾ ಎಂಬ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಅವರಿಬ್ಬರ ಕುಟುಂಬದವರು ಮದುವೆಗೆ ಒಪ್ಪಿರಲಿಲ್ಲ. ಇದರಿಂದ ನೊಂದು ಅವರು ಆತ್ಮಹತ್ಯೆಗೆ ಶರಣಾಗಿದ್ದರು.

ಅವರಿಬ್ಬರ ಅಗಲಿಕೆಯ ದುಃಖದಿಂದ ನೊಂದ 2 ಕುಟುಂಬಗಳೂ ಭಿನ್ನಾಭಿಪ್ರಾಯ ಮರೆತು ಅವರ ಪ್ರತಿಮೆಗಳನ್ನು ಸ್ಥಾಪಿಸಿ ಅವುಗಳಿಗೆ ಮದುವೆ ಮಾಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿನ್ ಪುತ್ರಿ ಸಾರಾ ಜೊತೆ ಶುಭಮನ್ ಗಿಲ್ ಎಂಗೇಜ್ಮೆಂಟ್‌.

Thu Jan 19 , 2023
  ಇತ್ತೀಚೆಗೆ ನಟಿ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡಿದ ವಿಚಾರವಾಗಿ ಶುಭಮನ್ ಗಿಲ್ ಸುದ್ದಿಯಲ್ಲಿದ್ದರು. ಅವರು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಸ್ನೇಹ ಹೊಂದಿದ್ದರು ಎಂಬ ವದಂತಿಗಳು ಸಹ ಇವೆ. ಇದೀಗ ಟ್ವೀಟ್‌ ಒಂದು ಸಾಕಷ್ಟು ವೈರಲ್ ಆಗಿದೆ. ವಾಸ್ತವವಾಗಿ, ನಿನ್ನೆಯ ಪಂದ್ಯದಲ್ಲಿ ಶುಭಮನ್ ಗಿಲ್ ಡಬಲ್‌ ಸೆಂಚ್ಯುರಿ ಬಾರಿಸಿದರು, ಅಲ್ಲದೇ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಸಹ ಮುರಿದರು. ಈ ವೇಳೆ ಸ್ಟೇಡಿಯಂನಲ್ಲಿ […]

Advertisement

Wordpress Social Share Plugin powered by Ultimatelysocial