ಮಂಡ್ಯ: ವಿದ್ಯಾ ದೇಗುಲಗಳಲ್ಲಿ ಹಿಜಾಬ್​ ವಿವಾದ ಭುಗಿಲೆದ್ದಿದೆ.

ಮಂಡ್ಯ: ವಿದ್ಯಾ ದೇಗುಲಗಳಲ್ಲಿ ಹಿಜಾಬ್​ ವಿವಾದ ಭುಗಿಲೆದ್ದಿದೆ. ಮಂಡ್ಯದಲ್ಲಿ ಮಂಗಳವಾರವೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಇದಕ್ಕೆ ಪ್ರತಿಯಾಗಿ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಜೈಶ್ರೀರಾಮ್​ ಘೋಷಣೆ ಕೂಗಿದ್ದಾರೆ.ಈ ವೇಳೆ ಹಿಜಾಬ್​ಧಾರಿ ವಿದ್ಯಾರ್ಥಿನಿಯೊಬ್ಬರು ‘ಅಲ್ಲಾವು ಅಕ್ಬರ್, ಅಲ್ಲಾವು ಅಕ್ಬರ್, ಅಲ್ಲಾವು ಅಕ್ಬರ್… ಎಂದು ಘೋಷಣೆ ಕೂಗಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಕೂಡಲೇ ಕಾಲೇಜು ಸಿಬ್ಬಂದಿ ವಿದ್ಯಾರ್ಥಿನಿಯನ್ನು ಒಳಗೆ ಕಳುಹಿಸಿದರು.ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರನ್ನು ಒಳಗೆ ಬಿಟ್ಟ ಆಡಳಿತ ಮಂಡಳಿಯು, ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ತಡೆಯಿತು.ಎಲ್ಲಿಯವರೆಗೆ ಹಿಜಾಬ್ ತೆಗೆಯಲ್ಲ ಅಲ್ಲಿಯವರೆಗೆ ನಾವು ಕೇಸರಿ ಶಾಲು ತೆಗೆಯಲ್ಲ. ಒಬ್ಬರಿಗೊಂದು ಇನ್ನೊಬ್ಬರಿಗೆ ಒಂದು ನ್ಯಾಯ ಏಕೆ? ಇಲ್ಲಿ ಎಲ್ಲರೂ ಸಮಾನರು ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗುತ್ತಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಕ್ಕಿ ಕೌಶಲ್ ಕತ್ರಿನಾ ಕೈಫ್ ಜೊತೆಗೆ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆಯೇ?

Tue Feb 8 , 2022
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ 3 ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸ್ಪೈ ಥ್ರಿಲ್ಲರ್‌ನ ಚಿತ್ರೀಕರಣವನ್ನು ಬಹುತೇಕ ನಟರು ಪೂರ್ಣಗೊಳಿಸಿದ್ದಾರೆ. ಈಗ ಸಿನಿಮಾದ ಅಂತಿಮ ಪ್ಯಾಚ್ ವರ್ಕ್ ಬಾಕಿ ಉಳಿದಿದೆ. ಸಲ್ಮಾನ್ ಮತ್ತು ಕತ್ರಿನಾ ಪ್ರೇಮಿಗಳ ದಿನದಂದು ದೆಹಲಿಯಲ್ಲಿ ಚಿತ್ರದ ಅಂತಿಮ ಕೆಲಸವನ್ನು ಪೂರ್ಣಗೊಳಿಸುತ್ತಾರೆ ಎಂದು IndiaToday.in ಪ್ರತ್ಯೇಕವಾಗಿ ತಿಳಿದುಕೊಂಡಿದೆ. ವಿಕ್ಕಿ ಕೌಶಲ್ ತನ್ನ ಪತ್ನಿಯೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸಲು ದೆಹಲಿಗೆ ಹಾರುತ್ತಾರಾ ಎಂಬ ಪ್ರಶ್ನೆ […]

Advertisement

Wordpress Social Share Plugin powered by Ultimatelysocial