ತೆಲುಗು ಸಿನಿಮಾ ಸೆಟ್‌ನಲ್ಲಿ ಸಲ್ಮಾನ್ ಖಾನ್ ಹಿಂದಿ ಸಿನಿಮಾ ಶೂಟಿಂಗ್!

ಬಾಲಿವುಡ್‌ನ ಸ್ಟಾರ್ ನಟ ಸಲ್ಮಾನ್ ಖಾನ್ ತೆಲುಗು ಸಿನಿಮಾದಲ್ಲಿ ನಟಿಸಿರುವುದು ಈಗ ಹಳೆಯ ಸುದ್ದಿ. ಚಿರಂಜೀವಿ ಜೊತೆ ‘ಗಾಡ್ ಫಾದರ್’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ಸಲ್ಮಾನ್ ಖಾನ್, ಚಿರಂಜೀವಿ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ, ಆಕ್ಷನ್ ದೃಶ್ಯದಲ್ಲಿ ಸಹ ನಟಿಸಿದ್ದಾರೆ.

ಆದರೆ ಈಗ ಬರುತ್ತಿರುವ ಹೊಸ ಸುದ್ದಿಯೆಂದರೆ ತೆಲುಗಿನ ಸಿನಿಮಾಕ್ಕಾಗಿ ಹಾಕಿದ ಸೆಟ್‌ನಲ್ಲಿ ಸಲ್ಮಾನ್‌ರ ಖಾನ್‌ರ ಹಿಂದಿ ಸಿನಿಮಾದ ಶೂಟಿಂಗ್ ನಡೆಯಲಿದೆಯಂತೆ!

ಸಲ್ಮಾನ್ ಖಾನ್‌ರ ‘ಟೈಗರ್ 3’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಂಬೈನಲ್ಲಿ ನಡೆಯಲಿದೆ. ಜೊತೆಗೆ ಹೈದರಾಬಾದ್‌ನಲ್ಲಿ ಸಹ ಕೆಲವು ಭಾಗಗಳ ಚಿತ್ರೀಕರಣ ನಡೆಯಲಿದೆ.

ಹೈದರಾಬಾದ್‌ನಲ್ಲಿ ನಟ ಚಿರಂಜೀವಿ ಅವರ ವಿಸ್ತಾರವಾದ ಜಮೀನಿನಲ್ಲಿ ‘ಆಚಾರ್ಯ’ ಸಿನಿಮಾಕ್ಕಾಗಿ ಹಾಕಲಾಗಿರುವ ಸೆಟ್‌ನಲ್ಲಿ ಚಿರಂಜೀವಿ ನಟನೆಯ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದ ಶೂಟಿಂಗ್ ನಡೆಯಲಿದೆ ಎನ್ನಲಾಗುತ್ತಿದೆ.

‘ಆಚಾರ್ಯ’ ಸಿನಿಮಾಕ್ಕಾಗಿ ಏಷ್ಯಾದಲ್ಲಿಯೇ ಬೃಹತ್ ಸೆಟ್ ಹಾಕಲಾಗಿತ್ತು. ಸೆಟ್ ಅನ್ನು ಪೂರ್ಣವಾಗಿ ತೆಗೆಯಲಾಗಿಲ್ಲವಾದ್ದರಿಂದ. ಅದೇ ಸೆಟ್‌ ಅನ್ನು ಬಳಸಿ ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಸಲ್ಮಾನ್ ಖಾನ್‌ರ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತದೆಯಂತೆ.

ತಮ್ಮ ಸಿನಿಮಾದ ಸೆಟ್‌ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲು ಚಿರಂಜೀವಿ ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರಂತೆ. ತಮ್ಮ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿರುವ ಸಲ್ಮಾನ್ ಖಾನ್‌ಗೆ ತಮ್ಮ ಸೆಟ್‌ನಲ್ಲಿ ಚಿತ್ರೀಕರಣ ಮಾಡಲು ಅನುಮತಿ ನೀಡುವುದಿಲ್ಲವೇ!

ಇನ್ನು ಸಲ್ಮಾನ್ ಖಾನ್‌ರ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ನಿರ್ಮಾಪಕ ಸಾಜಿದ್ ನಾಡಿಯಾವಾಲಾ ನಿರ್ಮಾಣ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಕ್ಕಾಗಿ ಬದಲಾಯ್ತು ರಕ್ಷಿತ್ ಶೆಟ್ಟಿ ಲುಕ್..!

Wed May 25 , 2022
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ನಂತರ ನಿರ್ದೇಶಕ ಹೇಮಂತ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಮತ್ತೆ ಒಂದಾಗಿದ್ದಾರೆ. ಈ ಜೋಡಿ ಒಂದಾಗಿ ವಿಭಿನ್ನ ರೀತಿಯ ಚಿತ್ರ ಮಾಡಿದ್ದು, ಅದಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ಎಂದು ಚಂದದ ಹೆಸರು ಕೂಡ ಇಟ್ಟಿದ್ದಾರೆ. ಈ ಸಿನಿಮಾ ಫಸ್ಟ್ ಲುಕ್ ಇಂದು ಬಿಡುಗಡೆ ಆಗಿದೆ. ಫಸ್ಟ್ ಲುಕ್ ಕಂಡು ರಕ್ಷಿತ್ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಮಲ್ಲಿಗೆಯಂತೆ ತೂಗುತ್ತಿದ್ದ ರಕ್ಷಿತ್ ಗುಲಾಬಿ ರೀತಿಯಲ್ಲಿ ಉಬ್ಬಿಕೊಂಡಿರುವುದಕ್ಕೆ ಕಾರಣವನ್ನೂ […]

Advertisement

Wordpress Social Share Plugin powered by Ultimatelysocial