ಸದಾ ಕನ್ನಡಪರ ಕೆಲಸಗಳನ್ನು ಮಾಡ್ತಾ ಇರ್ತಾರೆ.

ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್ ಬಾಸ್ ನಿಂದ ಹೆಚ್ಚು ಖ್ಯಾತಿ ಹೊಂದಿದ್ದಾರೆ.

ಸದಾ ಕನ್ನಡಪರ ಕೆಲಸಗಳನ್ನು ಮಾಡ್ತಾ ಇರ್ತಾರೆ.

ಕನ್ನಡ ಹೋರಾಟಗಾರ ಎಂದೇ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಕನ್ನಡಹಬ್ಬ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

ಬ್ರಿಗೇಡ್ ರೋಡ್ ಬಳಿ ನಡೆಯುತ್ತಿರೋ ಕನ್ನಡ ಕುಣಿತ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮಾನ್ಯ ಶ್ರೀ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಆಹ್ವಾನ ಕೊಡಲಾಯಿತು ಎಂದು ರೂಪೇಶ್ ರಾಜಣ್ಣ ಪೋಸ್ಟ್ ಹಾಕಿಕೊಂಡಿದ್ದಾರೆ.

ಇದೇ ತಿಂಗಳ 25 ರಂದು, ಶನಿವಾರ ಸಂಜೆ 5.30 ರಿಂದ, ಬ್ರಿಗೇಡ್ ರೋಡ್ ಬಳಿ ಕನ್ನಡಹಬ್ಬ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.

ಎಲ್ಲಾ ಕನ್ನಡಿಗರು ಭಾಗವಹಿಸಿ, ಕನ್ನಡ ಹಾಡುಗಳಿಗೆ ಡಿಜೆ ಕಾರ್ಯಕ್ರಮ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಅಶ್ವಿನಿ ಅವರನ್ನು ಆಹ್ವಾನಿಸಲಾಗಿದೆ. ನೀವು ತೋರಿದ ಪ್ರೀತಿಗೆ ಧನ್ಯವಾದ ಅಕ್ಕ, ತುಂಬಾ ಥ್ಯಾಂಕ್ಸ್ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಸೀಸನ್ 09 ವಿಶೇಷವಾಗಿರು ರೂಪೇಶ್ ರಾಜಣ್ಣ ಅಹ ಕಾರಣ, ನವೀನರಾಗಿ ಎಂಟ್ರಿ ಕೊಟ್ಟಿದ್ದ ರೂಪೇಶ್ ರಾಜಣ್ಣ ಟಾಪ್ 5 ನಲ್ಲಿ ಇದ್ರು.

ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಲ್ಲೂ ಯಾವುದಾದರೊಂದು ವಿಚಾರಕ್ಕೆ ಜಗಳವಾಡುತ್ತಾ ಇದ್ದರು. ಜೋರು ಮಾತಿನಿಂದಲೇ ಖ್ಯಾತಿ ಹೊಂದಿದ್ದರು.ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಲ್ಲೂ ಕನ್ನಡದ ಕಂಪು ಹರಡುತ್ತಿದ್ರು. ಹೊರಗೆ ಬಂದ ಮೇಲೂ ಕನ್ನಡದ ಕೆಲಸಗಳನ್ನು ಮುಂದುವರೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ' ನಟಿ ಶಿಲ್ಪಾ ಅಯ್ಯರ್

Fri Feb 17 , 2023
ಕಿರುತೆರೆ ನಟಿ ಶಿಲ್ಪಾ ಅಯ್ಯರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. `ಜೊತೆ ಜೊತೆಯಲಿ’ ಖ್ಯಾತಿಯ ನಟಿ ಶಿಲ್ಪಾ ಎಂಗೇಜ್ ಆಗಿದ್ದು, ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲಿವಿನ ನಿಲ್ದಾಣ ಸೀರಿಯಲ್ ಮೂಲಕ ಮೋಡಿ ಮಾಡಿರುವ ನಟಿ ಶಿಲ್ಪಾ ಅಯ್ಯರ್ ಅವರು ಇತ್ತೀಚಿಗೆ ಸಚಿನ್ ವಿಶ್ವನಾಥ್ ಜೊತೆ ಎಂಗೇಜ್ ಆಗಿದ್ದಾರೆ. ಕುಟುಂಬಸ್ಥರು ಸೂಚಿಸಿದ ವರನ ಜೊತೆ ಜನವರಿಯಲ್ಲಿ ಶಿಲ್ಪಾ ಅವರ ನಿಶ್ಚಿತಾರ್ಥ ನೆರವೇರಿದೆ. […]

Advertisement

Wordpress Social Share Plugin powered by Ultimatelysocial