ಮತ್ತೊಮ್ಮೆ ಕ್ರೇಜಿಸ್ಟಾರ್ ಜೊತೆಗೂಡಿದ ನಟಿ ಅಪೂರ್ವ.

ವಿಚಂದ್ರನ್ ಅವರ ಮುಂಬರುವ ಚಿತ್ರ, ನಟ ಅನೀಸ್ ಅವರ ಚೊಚ್ಚಲ ನಿರ್ದೇಶನ ಚಿತ್ರವು ಕೆಲ ನಿರ್ಣಾಯಕ ಬದಲಾವಣೆಗಳ ಮೂಲಕ ಸಾಗಿದ್ದು, ಈ ಹಿಂದೆ ಗೌರಿ ಎಂದು ಹೆಸರಿಸಲಾಗಿದ್ದ ಫ್ಯಾಮಿಲಿ ಎಂಟರ್ಟೈನರ್ ಚಿತ್ರಕ್ಕೆ ಇದೀಗ ಗೌರಿ ಶಂಕರ ಎಂದು ಹೆಸರಿಡಲಾಗಿದ್ದು, ರೂಪದರ್ಶಿ-ನಟಿ ಬರ್ಖಾ ಸೇನ್ಗುಪ್ತಾ ಅವರ ಬದಲಿಗೆ ಚಿತ್ರದಲ್ಲಿ ನಟಿ ಅಪೂರ್ವ ಅವರು ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಮುಂಬರುವ ಚಿತ್ರ, ನಟ ಅನೀಸ್ ಅವರ ಚೊಚ್ಚಲ ನಿರ್ದೇಶನ ಚಿತ್ರವು ಕೆಲ ನಿರ್ಣಾಯಕ ಬದಲಾವಣೆಗಳ ಮೂಲಕ ಸಾಗಿದ್ದು, ಈ ಹಿಂದೆ ಗೌರಿ ಎಂದು ಹೆಸರಿಸಲಾಗಿದ್ದ ಫ್ಯಾಮಿಲಿ ಎಂಟರ್ಟೈನರ್ ಚಿತ್ರಕ್ಕೆ ಇದೀಗ ಗೌರಿ ಶಂಕರ ಎಂದು ಹೆಸರಿಡಲಾಗಿದ್ದು, ರೂಪದರ್ಶಿ-ನಟಿ ಬರ್ಖಾ ಸೇನ್ಗುಪ್ತಾ ಅವರ ಬದಲಿಗೆ ಚಿತ್ರದಲ್ಲಿ ನಟಿ ಅಪೂರ್ವ ಅವರು ನಟಿಸುತ್ತಿದ್ದಾರೆ.
ಈ ಹಿಂದೆ ಅಪೂರ್ವ ಅವರು ಕ್ರೇಜಿಸ್ಟಾರ್ ರವಿಚಂದ್ರ ಅವರ ಅಪೂರ್ವ ಚಿತ್ರದಲ್ಲಿ ನಟಿಸಿದ್ದರು, ಈ ಚಿತ್ರ ಅಪೂರ್ವ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತ್ತು. ಇದೀಗ ಮರಳಿ ಕ್ರೇಜಿಸ್ಟಾರ್ ಅವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಕ್ಟರಿ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಪೂರ್ವ ಅವರು, ಚಿತ್ರೀಕರಣದ ಹಂತದಲ್ಲಿರುವ ಸೂತ್ರಧಾರಿ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಗೌರಿ ಶಂಕರ ಚಿತ್ರದ ಚಿತ್ರೀಕರಣವು ಜನವರಿ 22 ರಂದು ದಾಂಡೇಲಿಯಲ್ಲಿ ಪ್ರಾರಂಭವಾಗಲಿದೆ.

ಚಿತ್ರದಲ್ಲಿ ಶೆಫರ್ಡ್ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದು, ಕ್ಯಾಡಬೊಮ್ ಹೇಡರ್ ಎಂಬ ಹೆಸರಿನಲ್ಲಿ ನಾಯಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಗೌರಿ ಶಂಕರ ಚಿತ್ರಕ್ಕೆ ಕಾರ್ತಿಕೇಯನ್ ಅವರ ಸಂಗೀತವಿರಲಿದ್ದು, ಸತೀಶ್ ಅವರ ಛಾಯಾಗ್ರಹಣವಿದೆ. ಏತನ್ಮಧ್ಯೆ, ರವಿಚಂದ್ರನ್ ಅವರು ಮುಂದಿನ ದಿನಗಳಲ್ಲಿ ದರ್ಶನ್ ಅವರ ಕ್ರಾಂತಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಈ ಚಿತ್ರ ಗಣರಾಜ್ಯೋತ್ಸವ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೆ, ನಟ ಧ್ರುವರ್ಜಾ ನಟನೆಯ ಮುಂಬರುವ ಚಿತ್ರ ಕೆಡಿಯಲ್ಲಿಯೂ ರವಿಚಂದ್ರನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಸಕರಾದವರು, ಮಂತ್ರಿಯವರು ಈ ರೀತಿ ಮಾಡೋದು ಸರಿಯಲ್ಲ.

Tue Jan 17 , 2023
ಶಾಸಕರಾದವರು, ಮಂತ್ರಿಯವರು ಈ ರೀತಿ ಮಾಡೋದು ಸರಿಯಲ್ಲ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅತೃಪ್ತಿ. ಈ ವಿಚಾರ ನನಗೆ ಎಳ್ಳಷ್ಟು ಒಪ್ಪಿಗೆಯಾಗಿಲ್ಲ. ಜನಪ್ರತಿನಿಧಿಗಳೇ ಈ ರೀತಿ ಕಚ್ಚಾಡಿದರೆ ಹೇಗೆ. ಜನಪ್ರತಿನಿಧಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು. ಯಾರೇ ಮಾಡಿದ್ರು ಅದು ಸರಿಯಾದುದಲ್ಲ. ಸಾರ್ವಜನಿಕರ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ವಿಚಾರ ಮಾಡಬೇಕು. ಶಾಸಕರು ಹೇಳಿದಾಗ ಮಂತ್ರಿಯಾದವರು ಒಂದಷ್ಟು ತಡೆದುಕೊಳ್ಳಬೇಕು. ಸಿಡಿ ಇತ್ಯಾದಿ ಮಾಡ್ತೀನಿ ಅಂತಾರೆ, ಏನಿದರ ಅರ್ಥ. […]

Advertisement

Wordpress Social Share Plugin powered by Ultimatelysocial