ಅಪ್ಪು ಸಮಾಧಿಯತ್ತಾ ಅಭಿಮಾನಿಗಳ ದಂಡು…!

Puneeth Rajkumar : ಇಂದಿನಿಂದ ಅಭಿಮಾನಿಗಳಿಗೆ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ

ನಮ್ಮನೆಲ್ಲ​ ಬಿಟ್ಟು ಪವರ್​ ಸ್ಟಾರ್ ಬಾರದ ಲೋಕಕ್ಕೆ ಹೊಗಿದ್ದಾರೆ. ಆದರೆ ಈ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. 6 ದಿನ ಅಲ್ಲ, 6 ಸಾವಿರ ದಿನಗಳು ಕಳೆದrರು ಅಪ್ಪು(Appu) ನೆನೆಪುಗಳು ನಮ್ಮಿಂದ ದೂರವಾಗುವುದಿಲ್ಲ.

ಎಲ್ಲೆ ಹೋದರು, ಎಲ್ಲೆ ಬಂದರು ಪುನೀತ್​ #ರಾಜ್​ಕುಮಾರ್​ ಅವರ ನಗು ಮುಖ ನಮ್ಮನ್ನ ಹಿಂಬಾಲಿಸಿ ಬರುತ್ತಿದೆ. ನಿನ್ನೆ ಡಾ.ರಾಜ್​ಕುಮಾರ್​(Dr.Rajkumar) ಕುಟುಂಬಸ್ಥರೆಲ್ಲ ಅಪ್ಪು ಸಮಾಧಿ ಬಳಿ ಬಂದು ಹಾಲು-ತುಪ್ಪ ಕಾರ್ಯವನ್ನು ನೇರವೇರಿಸಿದ್ದರು. ಇದಾದ ಬಳಿಕ ಅಪ್ಪು ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ(Permission) ನೀಡುತ್ತೇವೆ ಎಂದು ರಾಘಣ್ಣ ಹೇಳಿದ್ದರು. ಅದರಂತೆ ಇಂದಿನಿಂದ ಸಾರ್ವಜನಿಕರಿಗೆ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. 25 ಲಕ್ಷಕ್ಕೂ ಹೆಚ್ಚು ಜನರು ಅಪ್ಪು ಅಂತಿಮ ದರ್ಶನವನ್ನು ಪಡೆದುಕೊಂಡಿದ್ದರು. ಇನ್ನೂ ಅದೆಷ್ಟೋ ಮಂದಿ ಅಪ್ಪು ಅಂತಿಮ ದರ್ಶನಕ್ಕೆ ಕಾದು ಕುಳಿತಿದ್ದರು. ಆದರೆ ಅಂತ್ಯಕ್ರಿಯೆ ವೇಳೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕಂಠೀರವ ಸ್ಟುಡಿಯೋ(Kanteerava Studio) ಸುತ್ತಮುತ್ತ ಸೆಕ್ಷನ್​ 144 ಜಾರಿಗೊಳಿಸಲಾಗಿತ್ತು. ಮತ್ತೆ ಇಂದಿನಿಂದ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
Please follow and like us:

Leave a Reply

Your email address will not be published. Required fields are marked *

Next Post

4.11 ಲಕ್ಷ ಪಡಿತರ ಚೀಟಿ ಮಂಜೂರು..!

Wed Nov 3 , 2021
ರಾಜ್ಯದಲ್ಲಿ ಹೊಸದಾಗಿ 4.11 ಲಕ್ಷ ಪಡಿತರ ಚೀಟಿಗಳನ್ನು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ‘2.66 ಲಕ್ಷ ಆದ್ಯತಾ ವಲಯದ  ಮತ್ತು 1.45 ಎಪಿಎಲ್ ಪಡಿತರ ಚೀಟಿಗಳಿಗೆ ಅನುಮೋದನೆ ನೀಡಿದ್ದೇನೆ. ಇದರಿಂದ 4.11 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು. Please follow and like us:

Advertisement

Wordpress Social Share Plugin powered by Ultimatelysocial