ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ: ಪರಿಚಿತರ ಮನೆಗೆ ವಿದ್ಯಾರ್ಥಿನಿಯರ ಕರೆದೊಯ್ದು ಅತ್ಯಾಚಾರ

ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ: ಪರಿಚಿತರ ಮನೆಗೆ ವಿದ್ಯಾರ್ಥಿನಿಯರ ಕರೆದೊಯ್ದು ಅತ್ಯಾಚಾರ

ಹೊಸಕೋಟೆ: ಬಾಲಕರಿಬ್ಬರು ಪರಿಚಿತರ ಮನೆಗೆ ಇಬ್ಬರು ಅಪ್ರಾಪ್ತೆಯರನ್ನು ಕರೆದುಕೊಂಡು ಹೋಗಿ ಅಲ್ಲೇ ಉಳಿಸಿಕೊಂಡು ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಾಲಕರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಹೊಸಕೋಟೆ ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿಯರಿಬ್ಬರು ಡಿಸೆಂಬರ್ 7 ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೊಸಕೋಟೆಗೆ ತೆರಳಿದ್ದವರು ರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಪೋಷಕರು ಡಿಸೆಂಬರ್ 8 ರಂದು ಪೊಲೀಸರಿಗೆ ದೂರು ನೀಡಿದ್ದು, ನಂತರದಲ್ಲಿ ಠಾಣೆಗೆ ಬಂದ ಬಾಲಕಿಯರು ಹೊಸಕೋಟೆಯಿಂದ ಪರಿಚಿತ ಇಬ್ಬರು ಹುಡುಗರು ಚಿತ್ತೂರಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅತ್ಯಾಚಾರ ಎಸಗಿರುವುದಾಗಿ ದೂರಿದ್ದಾರೆ.

17 ವರ್ಷದ ಇಬ್ಬರು ಬಾಲಕರನ್ನು ಡಿಸೆಂಬರ್ 15 ರಂದು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಚಿತ್ತೂರಿಗೆ ಹೋಗಿರಲಿಲ್ಲ. ಕೆಜಿಎಫ್ ನಲ್ಲಿ ಪರಿಚಿತರ ಮನೆಯಲ್ಲಿ ಉಳಿದುಕೊಂಡಿದ್ದು, ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದಾರೆನ್ನಲಾಗಿದೆ. ಬಾಲಕರನ್ನು ಬಾಲಮಂದಿರಕ್ಕೆ ಬಿಡಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತಿಂಗಳಿಗೆ ʼ₹55 ಠೇವಣಿʼ ಮಾಡಿದ್ರೂ, ವೃದ್ಧಾಪ್ಯದಲ್ಲಿ ʼ₹36,000 ಪಿಂಚಣಿʼ ಸಿಗುತ್ತೆ : ಅದ್ಭುತ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ.!

Sun Jan 2 , 2022
ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಖಾಸಗಿ ಉದ್ಯೋಗಳಿಗೆ, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪಿಂಚಣಿ ಯೋಜನೆಗಳಿವೆ. ಇನ್ನು ಸರ್ಕಾರಿ ನೌಕರರಿಗೆ ಸರ್ಕಾರದ ಹಲವು ಪಿಂಚಣಿ ಯೋಜನೆಗಳಿವೆ. ಆದ್ರೆ, ಅಸಂಘಟಿತ ವಲಯದ ಕಾರ್ಮಿಕರಿಗೆ ಯಾವುದೇ ಪಿಂಚಣಿ ಯೋಜನೆಗಳಿಲ್ಲದ ಕಾರಣ ಕೇಂದ್ರಸರ್ಕಾರ ʼಪ್ರಧಾನಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆʼ (PMSYM) ಯೋಜನೆಯನ್ನ ಪ್ರಾರಂಭಿಸಿದೆ. ಈ ಯೋಜನೆಯಡಿ ಅಸಂಘಟಿತ ಕಾರ್ಮಿಕರಿಗೂ ನಿವೃತ್ತಿಯ ನಂತ್ರ ವರ್ಷಕ್ಕೆ 36,000 ಪಿಂಚಣಿ ಸಿಗಲಿದೆ. ನೀವಿದಕ್ಕೆ ಪ್ರತಿ ತಿಂಗಳು ನಿರ್ದಿಷ್ಟ […]

Advertisement

Wordpress Social Share Plugin powered by Ultimatelysocial