ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಜಂಬಲದಿನ್ನಿ ಸರಕಾರಿ ಪ್ರೌಢಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರ ವಿಶೇಷ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಯಿತು. ಮುಖ್ಯೋಪಾಧ್ಯಾಯರನ್ನು ವಿದ್ಯಾರ್ಥಿಗಳು ಪುಷ್ಪ ವೃಷ್ಟಿ ಧಾರೆ ಮುಖಾಂತರ ಹೃದಯ ಸ್ಪರ್ಶಿ ಯಾಗಿ ಬೀಳ್ಕೊಟ್ಟರು. ಅಬೂಬಕರ್ ಹಜರತಲಿ ನಾಯಕ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಶಿಕ್ಷಣ ಸಂಯೋಜಕರಾಗಿ 2020 ರಿಂದ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಸುದೀರ್ಘ 41 ವರ್ಷಗಳ ಸೇವೆಸಲ್ಲಿಸಿ ಮೇ 31 ರಂದು ನಿವೃತ್ತಿ ಹೊಂದಿದರು.ಸರಕಾರಿ ಪ್ರೌಢಶಾಲೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯವರು, ಅಕ್ಷರ ದಾಸೋಹ ನೌಕರರ ಹಾಗೂ ಎಲ್ಲಾ ವಿದ್ಯಾರ್ಥಿಗಳೂ ವಿಶೇಷವಾಗಿ ಸತ್ಕರಿಸಿ ಕಾರ್ಯಾಲಯದಿಂದ ಮುಖ್ಯದ್ವಾರದವರೆಗೆ ವಿದ್ಯಾರ್ಥಿಗಳ ಪುಷ್ಪ ವೃಷ್ಟಿ ಧಾರೆ ಮುಖಾಂತರ ಹೃದಯ ಸ್ಪರ್ಶಿಯಾಗಿ ಬೀಳ್ಕೊಡಲಾಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada