ʻತನ್ನ ನೆಚ್ಚಿನ ನಟನ ಸಿನಿಮಾ ಚೆನ್ನಾಗಿಲ್ಲʼ ಅಂತ ಮನನೊಂದ ಅಭಿಮಾನಿ ಆತ್ಮಹತ್ಯೆ.

ಆಂಧ್ರಪ್ರದೇಶ: ತನ್ನ ನೆಚ್ಚಿನ ನಟನ ಸಿನಿಮಾ ಚೆನ್ನಾಗಿಲ್ಲ ಅಂತ ಮನನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ನಗರದ ತಿಲಕ್ ನಗರದಲ್ಲಿ ನಡೆದಿದೆ.

 

ನಗರದ ನಿವಾಸಿ ರವಿ ಮೃತ ದುರ್ದೈವಿ. ಈತ ವೆಲ್ಡಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಇತ್ತೀಚೆಗಷ್ಟೇ ತನ್ನ ನೆಚ್ಚಿನ ನಟನ ಸಿನಿಮಾ ರಿಲೀಸ್ ಆಗಿತ್ತು. ಹೀಗಾಗಿ ಶುಕ್ರವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿದ್ದಾರೆ. ನಂತರ ಮನೆಗೆ ಬಂದ ರವಿ ತಾನು ನಿರೀಕ್ಷಿಸಿದಷ್ಟು ಸಿನಿಮಾ ಚೆನ್ನಾಗಿಲ್ಲ, ತನ್ನ ನೆಚ್ಚಿನ ನಾಯಕನಿಗೆ ಸಿನಿಮಾದ ಮೇಲೆ ಕಟ್ಟ ಅಭಿಪ್ರಾಯಗಳು ಮೂಡಿಬರುತ್ತಿವೆ ಎಂದು ದುಃಖಿತನಾಗಿ ಅದೇ ರಾತ್ರಿ ಅವನು ನೇಣಿಗೆ ಶರಣಾಗಿದ್ದಾನೆ.

ಶನಿವಾರ ಬೆಳಗ್ಗೆ ಅವನ ತಾಯಿ ಎಷ್ಟೇ ಕರೆದರೂ ಬಾಗಿಲು ತೆರೆದಿಲ್ಲ. ನಂತರ ವೆಲ್ಡಿಂಗ್ ಯಂತ್ರದಿಂದ ಬಾಗಿಲು ತೆಗೆದಾಗ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಈ ವೇಳ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.

ಮೃತನ ತಾಯಿಯ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಲ್ಲಿ ಇನ್ನು 6 ರಿಂದ 8 ತಿಂಗಳು ಪವರ್ ಕಟ್!

Mon Mar 14 , 2022
ಬೆಂಗಳೂರು, ಮಾರ್ಚ್ 14; ಬೇಸಿಗೆ ಈಗಷ್ಟೇ ಆರಂಭವಾಗಿದೆ ಬೆಂಗಳೂರು ನಗರದಲ್ಲಿ ಪ್ರತಿದಿನ ಪವರ್ ಕಟ್ ಬಿಸಿ ಜನರಿಗೆ ತಟ್ಟುತ್ತಿದೆ.ಅದರಲ್ಲೂ ವಾರಾಂತ್ಯದಲ್ಲಿ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಪ್ರಕಟಣೆ ಹೊರಡಿಸುವುದು ಸಾಮಾನ್ಯವಾಗಿದೆ. ಆದರೆ ಜನರನ್ನು ಚಿಂತೆಗೆ ದೂಡುವ ಮತ್ತೊಂದು ಸುದ್ದಿ […]

Advertisement

Wordpress Social Share Plugin powered by Ultimatelysocial