ದೇಶ ಆರ್ಥಿಕ ಹಿಂಜರಿತದಲ್ಲಿದೆ, ಹೀಗಾಗಿ ಹಬ್ಬದ ಸೀಸನ್ನಲ್ಲಿ ಶಾಪಿಂಗ್ ಕಥೆ ಏನಾಗಬಹುದು ಅನ್ನೋ ಭೀತಿಯಲ್ಲಿದ್ದ ಉದ್ಯಮ ವರ್ಗಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಈ ಬಾರಿಯ ನವರಾತ್ರಿ ಶಾಪಿಂಗ್ ದೇಶಾದ್ಯಂತ ಭರ್ಜರಿಯಾಗಿ ಸಾಗಿದೆ. ಎಕನಾಮಿಕ್ ಟೈಮ್ಸ್ ಬೆಂಗಳೂರು : ಆರ್ಥಿಕ ಬೆಳವಣಿಗೆಯ ಮಂದಗತಿಯ ಹೊರತಾಗಿಯೂ, ಈ ವರ್ಷದ ಹಬ್ಬಗಳ ಋುತುವಿನ ಮೊದಲ ವಾರದಲ್ಲೇ ಶಾಪಿಂಗ್ ನಿರೀಕ್ಷೆಗೂ ಮೀರಿ ಭರ್ಜರಿ ಆರಂಭ ಪಡೆದಿದೆ. ಹೀಗಾಗಿ ಬೃಹತ್ ರಿಟೇಲ್ ಸರಣಿಗಳು, ಇ-ಕಾಮರ್ಸ್ ಕಂಪನಿ, ಮಾಲ್ಗಳು ನಿರಾಳವಾಗಿವೆ.
ಪಂಚಕುಲ (ಹರಿಯಾಣ): ಪ್ರಸಕ್ತ ಲೀಗ್ನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿ ಹೊರಹೊಮ್ಮಿರುವ ದಬಾಂಗ್ ಡೆಲ್ಲಿ ತಂಡದ ಗರ್ವ ಮುಡಿಯುವಲ್ಲಿ ಯಶಸ್ವಿಯಾದ ಬೆಂಗಾಲ್ ವಾರಿಯರ್ಸ್ ತಂಡ ದಿಲ್ಲಿ ಪಡೆಗೆ 42-33 ಅಂಕಗಳಿಂದ ಸೋಲುಣಿಸಿದೆ. ಆದರೂ ಅಂಕಪಟ್ಟಿಯಲ್ಲಿ ದಬಾಂಗ್ ತಂಡ ಅಗ್ರಸ್ಥಾನದಲ್ಲೇ ವಿರಾಜಮಾನವಾಗಿದೆ. ಇಲ್ಲಿನ ತಾವು ದೇವೀಲಾಲ್ ಕ್ರೀಡಾ ಸಂಕೀಣದಲ್ಲಿ ಸೋಮವಾರ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಬೆಂಗಾಲ್ ವಾರಿಯರ್ಸ್ ಗೆಲುವಿನ ಸಂಭ್ರಮ ಆಚರಿಸಿದರೆ, ದಬಾಂಗ್ ಡೆಲ್ಲಿ ತಂಡ ಲೀಗ್ನಲ್ಲಿ ತನ್ನ ಮೂರನೇ ಸೋಲಿನ ಕಹಿ […]
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮತ್ತಷ್ಟು ದಾಖಲೆಗಳನ್ನು ಪುಡಿಗಟ್ಟಲು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ವಿವಿಎಸ್ ಲಕ್ಷ್ಮಣ್, ಮೊಹಮ್ಮದ್ ಅಝರುದ್ದೀನ್ ಹಾಗೂ ಸೌರವ್ ಗಂಗೂಲಿಗೆ ಸಡ್ಡು ಹೊಡೆಯುವುದನ್ನು ಕೊಹ್ಲಿ ಎದುರು ನೋಡುತ್ತಿದ್ದಾರೆ. ಹೊಸದಿಲ್ಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ (ಅಕ್ಟೋಬರ್ 2) ಶುರುವಾಗಲಿರುವ 3 ಪಂದ್ಯಗಳ ಮೊದಲ ಹಣಾಹಣಿಗೆ ಟೀಮ್ ಇಂಡಿಯಾ ಸಜ್ಜಾಗಿದ್ದು, ಕ್ಯಾಪ್ಟನ್ ವಿರಾಟ್ ಕೊಹ್ಲಿ ಈ ಸರಣಿಯೊಂದಿಗೆ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಳ್ಳುವ ಕಡೆಗೆ ಎದುರು ನೋಡುತ್ತಿದ್ದಾರೆ. […]
ಸೂರತ್: ಹದಿನೈದರ ಹರೆಯದಲ್ಲೇ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿ ಭಾರತದ ಪರ ಆಡಿದ ಅತ್ಯಂತ ಕಿರಿಯ ವಯಸ್ಸಿನ ಆಗಾರ್ತಿ ಎಂಬ ದಾಖಲೆ ಬರೆದಿದ್ದ ಶೆಫಾಲಿ ವರ್ಮಾ ತಮ್ಮ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದರು. ಆದರೆ, ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ 4ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದ ಶೆಫಾಲಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದ್ದರು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಮಹಿಳಾ ಪಡೆ, 17 ಓವರ್ಗಳಲ್ಲಿ 4 ವಿಕೆಟ್ಗೆ […]
ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಕದನ ರಂಗೇರುತ್ತಿದ್ದು, ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧದ ಟೆಸ್ಟ್ ಸರಣಿ ಮೂಲಕ ಅಖಾಡಕ್ಕೆ ಇಳಿಯುತ್ತಿದೆ. ವಿಶಾಖಪಟ್ಟಣದಲ್ಲಿ ಪ್ರಥಮ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಲೈವ್ ಸ್ಕೋರ್ ಅಪ್ಡೇಟ್ಗಳನ್ನು ಇಲ್ಲಿ ಪಡೆಯಬಹುದಾಗಿದೆ. ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಮೊದಲ ಟೆಸ್ಟ್ ಸರಣಿಯ ಮೊದಲ ಹಣಾಹಣಿ ಇಲ್ಲಿನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿದೆ
ನಟಿ ರಾಧಿಕಾ ಪಂಡಿತ್ ಮತ್ತು ಯಶ್ ಪುತ್ರಿ ಆಯಿರಾ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ರಾಕಿಂಗ್ ದಂಪತಿ ಮಗಳ ಮುದ್ದು ಫೋಟೋವನ್ನು ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ ಹರಿದು ಬರುತ್ತೆ. ಸದ್ಯ ರಾಧಿಕಾ ಪಂಡಿತ್ ಮಗಳ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ಪುತ್ರಿಯ ಜೊತೆ ಮಾತನಾಡುತ್ತಿದ್ದಾರೆ. ರಾಧಿಕಾ ಮತ್ತು ಯಶ್ ಫೋಟೋವನ್ನು ಇಟ್ಟು ಅಪ್ಪ ಮತ್ತು […]
ತನಗೆ ಹೆಸರು, ಹಣ ತಂದುಕೊಟ್ಟಿದ್ದ ಬಣ್ಣದಲೋಕವನ್ನು ಬಿಟ್ಟು ರಾಜಕೀಯದಲ್ಲಿ ಸಾಧನೆ ಮಾಡಲು ಹೋಗಿ ಚಿರಂಜೀವಿ ಸೋತದ್ದು ಗೊತ್ತೇ ಇದೆ. ಇದಾದ ಹಲವು ವರ್ಷಗಳ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚಿರುವ ಮೆಗಾಸ್ಟಾರ್ ಚಿರಂಜೀವಿ “ಸೈರಾ ನರಸಿಂಹ ರೆಡ್ಡಿ” ಮೂಲಕ, ಗಾಂಧಿ ಜಯಂತಿಯ ದಿನದಂದು ತೆರೆಯಲ್ಲಿ ಆರ್ಭಟಿಸಲಿದ್ದಾರೆ. ವಿಚಾರ ಅದಲ್ಲ, ಇಲ್ಲಿ ಎರಡು ವಿಚಾರವಿದೆ. ಒಂದು, ಈ ಚಿತ್ರ ಕನ್ನಡ ಸಹಿತ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದು. ಇನ್ನೊಂದು, ಈ ಚಿತ್ರವನ್ನು […]
ಮೆಗಾಸ್ಟಾರ್ ಚಿರಂಜೀವಿ, ಬಿಗ್ ಬಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಅಭಿನಯಿಸಿರುವ ಸೈರಾ ನರಸಿಂಹ ರೆಡ್ಡಿ ಸಿನಿಮಾ ಇಂದು ದೇಶ ವಿದೇಶದಲ್ಲಿ ಗ್ರ್ಯಾಂಡ್ ಆಗಿ ತೆರೆಗೆ ಬಂದಿದೆ. ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿಯ ಜೀವನಾಧಾರಿತ ಸಿನಿಮಾ ಇದಾಗಿದ್ದು ಅಭಿಮಾನಿಗಳಲ್ಲಿ ಬಾರಿ ನಿರೀಕ್ಷೆ ಮೂಡಿಸಿತ್ತು. ನಿರ್ದೇಶಕ ಸುರೇಂದರ್ ರೆಡ್ಡಿ ಸಾರಥ್ಯದಲ್ಲಿ ಮೂಡಿ ಬಂದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಬೆಳ್ಳಂಬೆಳಗ್ಗೆ ಪ್ರದರ್ಶನವಾಗುತ್ತಿದೆ. […]
ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ನಿರ್ಮಾಣದ ಜೊತೆಗೆ ಕಾಮಿಡಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತಾ ತೆರೆ ಮೇಲೆ ಮಿಂಚದೆ ದಶಕವೆ ಆಗಿದೆ. ‘ತಾಯಿಯ ಮಡಿಲು’ ಸಿನಿಮಾದ ನಂತರ ರಕ್ಷಿತ ಮತ್ತೆ ಬಣ್ಣ ಹಚ್ಚಿಲ್ಲ ಇತ್ತೀಚಿಗಷ್ಟೆ ಚಾಲೆಂಜಿಂಗ್ ಸ್ಟಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು “ಎ ಪ್ರೆಂಡ್ ಫಾರ್ ಲೈಫ್” ಅಂತ ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಕ್ರೇಜಿ ಕ್ವೀನ್ […]
ಮಹಾತ್ಮ ಗಾಂಧೀಜಿ ಹುಟ್ಟಿದ ದಿನ. ರಾಷ್ಟ್ರಪಿತನ ಹುಟ್ಟಹಬ್ಬವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಗಾಂಧಿ ಜಯಂತಿಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಸಾಕಷ್ಟು ಸೆಲೆಬ್ರಿಟಿಗಳು ಸಹ ಗಾಂಧಿ ಜಯಂತಿಗೆ ಶುಭಕೋರುತ್ತಿದ್ದಾರೆ. ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಹ ವಿಶೇಷವಾಗಿ ಶುಭಕೋರುವ ಜೊತೆಗೆ ಅಭಿಮಾನಿಗಳಿಗೆ ಮುಖ್ಯವಾದ ಸಂದೇಶ ನೀಡಿದ್ದಾರೆ. ಹೌದು, ಚುಲ್ ಬುಲ್ ಪಾಂಡೆ ಅಭಿಮಾನಿಗಳಿಗೆ ಯಾವಾಗಲು ಫಿಟ್ ಆಗಿರಿ ಅಲ್ಲದೆ ಸ್ವಚ್ಚ ಭಾರತದ ಕಡೆ ಗಮನ ಕೊಡಿ ಎಂದು […]