ಕೈಗೆ ಅಧಿಕಾರ ನಾಗೇಶ್ ವಿಶ್ವಾಸ.

ಕೆ.ಆರ್.ಪುರ, ಫೆ.೨೧-ಪಾರದರ್ಶಕ ಆಡಳಿತ ನಡೆಸುವ ಕಾಂಗ್ರೆಸ್ ಪಕ್ಷದ ಪರ ಜನರು ಒಲವು ತೋರಿದ್ದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಶಾಸಕ ಹೆಚ್ ನಾಗೇಶ್ ಹೇಳಿದರು.
ಮಹದೇವಪುರ ಕ್ಷೇತ್ರದ ಆವಲಹಳ್ಳಿಯಲ್ಲಿ ಡ್ರೀಮ್ ಸ್ಮಾಶರಸ್ ವತಿಯಿಂದ ಆಯೋಜಿಸಿದ್ದ ಮೂರನೇ ವರ್ಷದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದಿಂದ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುವಂತಾಗಿದೆ,ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರು ಕುಟುಂಬದ ಕಷ್ಟಕರವಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ರಾಜ್ಯದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಬಿಜೆಪಿ ಸರ್ಕಾರವನ್ನು ಈಗಾಗಲೇ ಜನರು ತಿರಸ್ಕಾರ ಮಾಡಿದ್ದಾರೆ ಎಂದರು.ನಾನು ಸ್ಥಳೀಯನಾಗಿದ್ದು ಜನರ ನಾಡಿತ ಚೆನ್ನಾಗಿ ಗೊತ್ತಿದೆ,ಎಲ್ಲಾ ವರ್ಗದ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತೇನೆ,ಈ ಬಾರಿ ಮಹದೇವಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಇಲ್ಲಿನ ಮತದಾರರು ಹಾಗೂ ಮುಖಂಡರು ಆಹ್ವಾನ ನೀಡಿದ್ದಾರೆ,ಹೀಗಾಗಿ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲು ತೀರ್ಮಾನಕ್ಕೆ ಬಂದಿದ್ದೇನೆ.
ಪಕ್ಷದ ಹಿರಿಯ ನಾಯಕರು ಸಹ ಮಹದೇವಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಈ ಚುನಾವಣೆಯಲ್ಲಿ ನನಗೆ ಅವಕಾಶ ಮಾಡಿಕೊಟ್ಟರೆ ಐದು ವರ್ಷದಲ್ಲಿ ಮಹದೇವಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಪ್ಪ ಗ್ರಾ.ಪಂ ಸದಸ್ಯ ದೇವರಾಜ್, ಮುಖಂಡರಾದ ಚಿಕ್ಕ ಮುನಿಯಪ್ಪ, ನಾರಾಯಣ ಸ್ವಾಮಿ, ಪಿಳ್ಳಪ್ಪ ಮತ್ತಿತರರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ನಾನು ಇನ್ನೂ 25 ವರ್ಷ ನಟಿಸುತ್ತೇನೆ" ಎಂದ ಶಿವಣ್ಣ.

Tue Feb 21 , 2023
ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಹೀರೊ ಶಿವರಾಜ್‌ಕುಮಾರ್. ವಯಸ್ಸು 60, ಆದರೂ ಯಂಗ್‌ ಅಂಡ್ ಎನೆರ್ಜೆಟಿಕ್. ಶಿವಣ್ಣನಿಗೆ ಇಷ್ಟೊಂದು ವಯಸ್ಸು ಆಗೊಯ್ತಾ? ಅಂತ ಯಾರೂ ಊಹಿಸಲು ಸಾಧ್ಯವೇ ಇಲ್ಲ. ದಿನದಿಂದ ದಿನಕ್ಕೆ ಶಿವರಾಜ್‌ಕುಮಾರ್ ಯಂಗ್ ಆಗುತ್ತಿದ್ದಾರೆ. ಅವರ ಎಜರ್ಜಿ, ಸ್ಪೀಡ್ ಇವೆಲ್ಲವನ್ನೂ ಬೀಟ್ ಮಾಡೋಕೆ ಇಂದಿನ ಯುವಕರಿಗೇ ಸಾಧ್ಯವಿಲ್ಲ. ಆದರೂ, 125 ಸಿನಿಮಾಗಳು ಆಯ್ತು. ಇನ್ನೊಂದು 25 ಸಿನಿಮಾ ಮಾಡಿ ಶಿವಣ್ಣ ನಟನೆಯಿಂದ ನಿವೃತ್ತಿ ಪಡೆಯಬಹುದು ಎಂದು ಭಾವಿಸಿದ್ದರು. ಆದರಕ್ಕೆ ಶಿವಣ್ಣ ಸಂದೇಶ […]

Advertisement

Wordpress Social Share Plugin powered by Ultimatelysocial