ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಫೆ. 27ರಂದು ಶಿವಮೊಗ್ಗ ಹಾಗೂ ಬೆಳಗಾವಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮೋದಿ ಅವರು ಹೊಗಳಿಕೆಯ ಮಾತುಗಳನ್ನಾಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಟ ಚೇತನ್ ಅಹಿಂಸಾ ಅವರು ಟೀಕಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಅವರನ್ನು ಒಮ್ಮೆಯೂ ಪ್ರಸ್ತಾಪಿಸದೇ ಯಡಿಯೂರಪ್ಪವನ್ನು ಮಾತ್ರ ಉಲ್ಲೇಖಿಸಿದ್ದಾರೆ. ಬೊಮ್ಮಾಯಿ ಅವರು ಅಪ್ರಸ್ತುತ ಸ್ಥಾನಮಾನದ ಮುಖ್ಯಮಂತ್ರಿ ಎಂದು ಜರಿದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಚೇತನ್ ಅಹಿಂಸಾ, ‘ಶಿವಮೊಗ್ಗದಲ್ಲಿ ಪ್ರಧಾನಿ ಮೋದಿಯವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಒಮ್ಮೆಯೂ ಕೂಡ ಪ್ರಸ್ಥಾಪಿಸದೆ ಬಿಎಸ್ ಯಡಿಯೂರಪ್ಪರವರನ್ನು ಮತ್ತೆ-ಮತ್ತೆ ಉಲ್ಲೇಖಿಸಿದ್ದಾರೆ. ಬಿಜೆಪಿಯ ಮುಖ್ಯ ವರಿಷ್ಠರಿಗೆ ಗೊತ್ತು: 1) ಅಧಿಕಾರವನ್ನು ಉಳಿಕೊಳ್ಳಲು ಬಿಎಸ್ವೈ ಅವರ ಲಿಂಗಾಯತ ಲಾಬಿಗಳನ್ನು ಓಲಾಯಿಸುವುದೊಂದೇ ದಾರಿ; 2) ಬೊಮ್ಮಾಯಿ ಸರ್ಕಾರವು 20 ತಿಂಗಳಲ್ಲಿ ಯಾವುದೇ ಮೌಲ್ಯಯುತವಾದ ಕೊಡುಗೆ ನೀಡಿಲ್ಲ. ಬೊಮ್ಮಾಯಿ ಅವರು ಅಪ್ರಸ್ತುತ ಸ್ಥಾನಮಾನದ ಮುಖ್ಯಮಂತ್ರಿ’ ಎಂದು ಟೀಕಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada