ಬೆಳಗಾವಿಯ ಮತ್ತೊಬ್ಬ ಗುತ್ತಿಗೆದಾರ ಲಾಡ್ಜ್​ನಲ್ಲಿ ಆತ್ಮಹತ್ಯೆ

ಬಾಳೆಹೊನ್ನೂರು: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಉಡುಪಿ ಲಾಡ್ಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಬೆಳಗಾವಿ ಜಿಲ್ಲೆಯ ಮತ್ತೊಬ್ಬ ಗುತ್ತಿಗೆದಾರ ಬಾಳೆಹೊನ್ನೂರು ಪಟ್ಟಣದ ಲಾಡ್ಜ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಳಗಾವಿ ಮೂಲದ ಬಸವರಾಜ್​(47) ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ. ಮೂರು ದಿನಗಳ ಹಿಂದೆ ಕೊಠಡಿ ಪಡೆದಿದ್ದ ಬಸವರಾಜ್​ ಬುಧವಾರ ಬೆಳಗ್ಗೆ ಕೊಠಡಿಯಿಂದ ಹೊರಬಂದಿದ್ದರು. ಬಳಿಕ ಕೊಠಡಿ ಒಳಗೆ ತೆರಳಿದವರು ಹೊರಗೆ ಬಂದಿರಲಿಲ್ಲ. ಬುಧವಾರ ಮಧ್ಯಾಹ್ನದವರೆಗೂ ಕೊಠಡಿ ಬಾಗಿಲು ತೆರೆಯದಿದ್ದರಿಂದ ಅನುಮಾನಗೊಂಡ ಲಾಡ್ಜ್​ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದಾಗ ಕೊಠಡಿಯ ಫ್ಯಾನ್​ಗೆ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಬಸವರಾಜ್​ ಅವರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಳಗಾವಿಯಿಂದ ಕುಟುಂಬಸ್ಥರು ಬಂದ ಬಳಿಕ ಆತ್ಮಹತ್ಯೆಯ ಕಾರಣ ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.’

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೆಜಿಎಫ್ - ಅಧ್ಯಾಯ 2 ಬಾಕ್ಸ್ ಆಫೀಸ್: ಚಲನಚಿತ್ರವು ಟೈಗರ್ ಜಿಂದಾ ಹೈ,ಪಿಕೆ ಮತ್ತು ಸಂಜುವನ್ನು ಸೋಲಿಸುತ್ತದೆ; 3ನೇ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯಾಗಿದೆ!

Thu Apr 28 , 2022
ಬಹುಚರ್ಚಿತ ಮತ್ತು ಅಗಾಧ ಪ್ರಚಾರದ ಚಿತ್ರ ಕೆಜಿಎಫ್ – ಅಧ್ಯಾಯ 2 ಸುಮಾರು ಎರಡು ವಾರಗಳ ಹಿಂದೆ ಬಿಡುಗಡೆಯಾಯಿತು. ಯಶ್ ಅಭಿನಯದ ಚಿತ್ರವು ದೇಶೀಯ ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಅಬ್ಬರದ ಪ್ರತಿಕ್ರಿಯೆಗೆ ತೆರೆದುಕೊಂಡಿದೆ, ಇದು ಪ್ರತಿ ದಿನವೂ ಮೂಲಾದಲ್ಲಿ ರಾರಾಜಿಸುತ್ತಿದೆ. ರೂ.ಗೂ ಅಧಿಕ ಕಲೆಕ್ಷನ್ ರೆಕಾರ್ಡ್ ಮಾಡಿದ ನಂತರ. ದಿನದ 1 ರಂದು 50 ಕೋಟಿ, ಚಿತ್ರದ ವ್ಯಾಪಾರವು ಅದರ ಆರಂಭಿಕ ವಾರಾಂತ್ಯದಲ್ಲಿ ವೇಗವಾಗಿ ಬೆಳವಣಿಗೆಯನ್ನು ಕಂಡಿತು. ವಾಸ್ತವವಾಗಿ, ಕೆಜಿಎಫ್ […]

Advertisement

Wordpress Social Share Plugin powered by Ultimatelysocial