ರಾಯಚೂರು: ಮೇವು ತರಲು ಹೋಗಿದ್ದ ವೇಳೆ ಹಾವು ಕಚ್ಚಿ ಬಾಲಕಿ ಮೃತಪಟ್ಟ ಘಟನೆ ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಗೀತಾಂಜಲಿ (15) ಮೃತ ಬಾಲಕಿ.ಬೆಳಗ್ಗೆ ಮೇವು ತರಲು ಹೋದ ವೇಳೆ ಬಣವೆಯಲ್ಲಿದ್ದ ಹಾವು ಕಚ್ಚಿದೆ.ಆದರೆ, ಮುಳ್ಳು ಚುಚ್ಚಿರಬಹುದು ಎಂದು ನಿರ್ಲಕ್ಷ್ಯ ವಹಿಸಿದ್ದಾಳೆ.ಮನೆಗೆ ಬಂದು ಹುಷಾರಿಲ್ಲ ಎಂದು ಮಲಗಿದ್ದು, ಬಳಿಕ ಬಾಯಲ್ಲಿ ನೊರೆ ಬಂದಾಗ ವಿಷಯ ಗೊತ್ತಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ.ರಿಮ್ಸ್ ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada