ನಮ್ಮ ಸಿನಿಮಾ ಯಾಕೆ ದಕ್ಷಿಣದಲ್ಲಿ ಓಡುವುದಿಲ್ಲ: ಸಲ್ಮಾನ್ ಖಾನ್ ಪ್ರಶ್ನೆ

ಬೆಂಗಳೂರು: ರಾಜಮೌಳಿ ನಿರ್ದೇಶನದ ಚಿತ್ರ ‘ಆರ್‌ಆರ್‌ಆರ್‌’ ದೇಶದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಾಲಿವುಡ್‌ ಮಂದಿಯಿಂದ ಪ್ರಶಂಸೆ ಗಳಿಸುತ್ತಿದೆ.ನಟ ಸಲ್ಮಾನ್ ಖಾನ್ ಅವರು ಕೂಡ ಆರ್‌ಆರ್‌ಆರ್‌ ಚಿತ್ರವನ್ನು ಮೆಚ್ಚಿಕೊಂಡಿದ್ದು, ರಾಮ್ ಚರಣ್ ಅವರು ಪಾತ್ರವನ್ನು ನಿರ್ವಹಿಸಿರುವ ರೀತಿ ಅದ್ಭುತ ಎಂದಿದ್ದಾರೆ.ಐಐಎಫ್‌ಎ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಸಲ್ಲೂ ಬಾಯ್, ರಾಮ್ ಚರಣ್ ಮತ್ತು ಜ್ಯೂ. ಎನ್‌ಟಿಆರ್ ಅವರ ಸಿನಿಮಾ ಆರ್‌ಆರ್‌ಆರ್‌, ಬಾಲಿವುಡ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ನಮ್ಮ ಸಿನಿಮಾಗಳೇಕೆ ದಕ್ಷಿಣ ಭಾರತದಲ್ಲಿ ಯಶ ಕಾಣುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.ದಬಾಂಗ್ ಸರಣಿಯನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಮಾಡಿದಾಗಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಂಟೆಡ್ ಕೂಡ ದಕ್ಷಿಣದಲ್ಲಿ ಉತ್ತಮ ಗಳಿಕೆ ಕಂಡಿತು. ಆದರೆ ಬಾಲಿವುಡ್‌ನಲ್ಲಿ ನಮ್ಮ ಪ್ರಯತ್ನ ಸಾಲುತ್ತಿಲ್ಲ ಎಂದೆನಿಸುತ್ತಿದೆ ಎಂದು ಸಲ್ಮಾನ್ ಹೇಳಿರುವುದನ್ನು ಬಾಲಿವುಡ್‌ಲೈಫ್.ಕಾಂ ವರದಿ ಮಾಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಸ್ಪತ್ರೆಯು ವ್ಯಕ್ತಿಗೆ 2 ದಿನಗಳ ಚಿಕಿತ್ಸೆಗಾಗಿ ರೂ 52 ಲಕ್ಷವನ್ನು ವಿಧಿಸುತ್ತದೆ, ಅವನು ಸ್ವಂತ ಎಕ್ಸ್-ರೇ ಯಂತ್ರವನ್ನು ತಯಾರಿಸುತ್ತಾನೆ

Tue Mar 29 , 2022
ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಎರಡು ದಿನಗಳ ಚಿಕಿತ್ಸೆಗೆ 52 ಲಕ್ಷ ರೂಪಾಯಿ ಶುಲ್ಕ ವಿಧಿಸಿದ ನಂತರ ತಮ್ಮ ಎಕ್ಸ್-ರೇ ಯಂತ್ರವನ್ನು ನಿರ್ಮಿಸಿದ್ದಾರೆ. ವಿಲ್ ಓಸ್ಮಾನ್ ಎಂಬ ವ್ಯಕ್ತಿ ಅವರು ಪಾವತಿಸಲು ಕೇಳಿದ ಮೊತ್ತವನ್ನು ಕೇಳಿ ಆಘಾತಕ್ಕೊಳಗಾದರು ಎಂದು ಹೇಳಬೇಕಾಗಿಲ್ಲ. ಯೂಟ್ಯೂಬ್ ವೀಡಿಯೋಗಳನ್ನು ರಚಿಸುವ ಮತ್ತು ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಓಸ್ಮಾನ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು 2 ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರ ಚಿಕಿತ್ಸೆಗಾಗಿ ಬಿಲ್ ಸ್ವೀಕರಿಸಿದಾಗ, ಅವರು […]

Advertisement

Wordpress Social Share Plugin powered by Ultimatelysocial