ಬೆಳಿಗ್ಗೆ ಒಂದು ಲೋಟ ಇದನ್ನು ಕುಡಿದರೆ ತೂಕ ಇಳಿಯುತ್ತೆ

ಬೆಳಿಗ್ಗೆ ಒಂದು ಲೋಟ ಇದನ್ನು ಕುಡಿದರೆ ತೂಕ ಇಳಿಯುತ್ತೆ

ಸಿಹಿ ತಿನಿಸು ಮಾಡುವಾಗ ಒಣದ್ರಾಕ್ಷಿಯನ್ನು ಬಳಸುವುದು ಹೆಚ್ಚು. ಈ ಡ್ರೈ ಫ್ರುಟ್ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ತುಂಬ ಒಳ್ಳೆಯದು. ಒಣದ್ರಾಕ್ಷಿ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ಹೋಗಲಾಡಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಒಣದ್ರಾಕ್ಷಿಯ ನೀರನ್ನು ನೀವು ಪ್ರತಿನಿತ್ಯ ಕುಡಿಯುವುದರಿಂದ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತೆ.

ಒಣದ್ರಾಕ್ಷಿಯ ನೀರನ್ನು ಹೀಗೆ ಮಾಡಿ : 2 ಕಪ್ ನೀರಿಗೆ 150 ಗ್ರಾಂ ಒಣದ್ರಾಕ್ಷಿಯನ್ನು ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಇದನ್ನು ಸ್ವಲ್ಪ ಬಿಸಿ ಮಾಡಿ ನಾದಿಕೊಂಡು ಖಾಲಿಹೊಟ್ಟೆಯಲ್ಲಿ ಕುಡಿಯಿರಿ. ಇದಕ್ಕೆ ಬೇಕಾದರೆ ನೀವು ನಿಂಬೆಹಣ್ಣನ್ನು ಹಾಕಿಕೊಳ್ಳಬಹುದು.

ಒಣದ್ರಾಕ್ಷಿಯ ನೀರಿನ ಉಪಯೋಗ :

ಪ್ರತಿದಿನ ಒಣದ್ರಾಕ್ಷಿಯ ನೀರನ್ನು ಕುಡಿಯುವುದರಿಂದ ಲಿವರ್ ಬಲಗೊಳ್ಳುತ್ತದೆ. ಇದು ರಕ್ತವನ್ನು ಶುದ್ಧಗೊಳಿಸುತ್ತದೆ. ಅನೇಕ ರೋಗಗಳಿಂದ ರಕ್ಷಣೆ ನೀಡುತ್ತದೆ.

ಖಾಲಿ ಹೊಟ್ಟೆಯಲ್ಲಿ 1 ಲೋಟ ಒಣದ್ರಾಕ್ಷಿಯ ನೀರನ್ನು ಕುಡಿಯುವುದರಿಂದ ಮೆಟಾಬಾಲಿಜಮ್ ಬೂಸ್ಟ್ ಆಗುತ್ತದೆ. ಇದು ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ.

ಇದರಿಂದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುವುದಿಲ್ಲ. ಹೃದಯದ ತೊಂದರೆಯ ಭಯವೂ ಇರುವುದಿಲ್ಲ.

ಒಣದ್ರಾಕ್ಷಿಯ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ.

ಒಣದ್ರಾಕ್ಷಿ ಚರ್ಮದಲ್ಲಿ ಕಾಲಜನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಸುಕ್ಕುಗಳು, ಕಪ್ಪುಕಲೆ ಮತ್ತು ಮಚ್ಚೆಗಳಂತಹ ಸಮಸ್ಯೆಗಳು ದೂರವಾಗುತ್ತದೆ. ಒಣದ್ರಾಕ್ಷಿಯ ನೀರನ್ನು ಕುಡಿಯುವುದರಿಂದ ಮಲಬದ್ಧತೆ, ಆಯಾಸ ಮತ್ತು ಎಸಿಡಿಟಿಯಂತ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಒಣದ್ರಾಕ್ಷಿಯಲ್ಲಿರುವ ಬೋರಾನ್ ಅಂಶ ಮೂಳೆಗಳನ್ನು ಬಲಗೊಳಿಸುತ್ತದೆ. ಇದರಲ್ಲಿರುವ ಪೊಟ್ಯಾಶಿಯಮ್ ಕೂಡ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಇದರಲ್ಲಿರುವ ಎಂಟಿಆಕ್ಸಿಡೆಂಟ್ ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರೆಡಿಕಲ್ಸ್ ನಿಂದ ದೇಹವನ್ನು ರಕ್ಷಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಈ ಒಂದು ವಿಷಯದಲ್ಲಿ ಚೀನಾ, ಜಪಾನ್​ ಮತ್ತು ಜರ್ಮನಿಯನ್ನು ಮೀರಿಸಿದ ತೆಲಂಗಾಣ!

Sun Dec 26 , 2021
ಹೈದರಾಬಾದ್​​: ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆಯಲ್ಲಿ ತೆಲಂಗಾಣ ರಾಜ್ಯವೂ ಕುಖ್ಯಾತಿ ಪಾತ್ರವಾಗಿದೆ. ಮದ್ಯಪಾನ ಮತ್ತು ವೇಗದ ಚಾಲನೆಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದಾಗಿ ಇತ್ತೀಚಿನ ಅಂಕಿ-ಅಂಶಗಳು ಹೇಳುತ್ತಿವೆ. ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡರು ಕೂಡ ಅಪಘಾತಗಳ ಸಂಖ್ಯೆ ಇಳಿಯುತ್ತಿಲ್ಲ. 2021ರಲ್ಲಿ ತೆಲಂಗಾಣದಾದ್ಯಂತ 6690 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ. ಅಪಘಾತದ ಪ್ರಕರಣದಲ್ಲಿ ತೆಲಂಗಾಣ ಚೀನಾ, ಜಪಾನ್​ ಮತ್ತು ಜರ್ಮನಿಯನ್ನು ಮೀರಿಸಿದೆ ಎಂದು ಸುಪ್ರಿಂಕೋರ್ಟ್​ ಮಾಜಿ ನ್ಯಾಯಮೂರ್ತಿ ಹಾಗೂ ರಸ್ತ ಸುರಕ್ಷತಾ ಸಮಿತಿಯ ಮುಖ್ಯಸ್ಥರಾದ ಅಭಯ್​ […]

Advertisement

Wordpress Social Share Plugin powered by Ultimatelysocial