‘ಬೈರಾಗಿ’ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಮಾತು:

ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಾಯಕ ನಟ ಯಾರಾದರೂ ಇದ್ದರೆ ಅದು ಶಿವರಾಜ್ ಕುಮಾರ್. ಯಾರ ಬಳಿಯೂ ಇಲ್ಲದಷ್ಟು ಸಿನಿಮಾ ಪ್ರಾಜೆಕ್ಟ್‌ಗಳು ಶಿವರಾಜ್ ಕುಮಾರ್ ಅವರನ್ನು ಅರಸಿ ಬರುತ್ತವೆ, ಪ್ರತಿದಿನ ಒಬ್ಬರಾದರೂ ಶಿವಣ್ಣನಿಗೆ ಕತೆ ಹೇಳಲು ಕಾಯುತ್ತಿರುತ್ತಾರಂತೆ.

ಅಷ್ಟು ಬ್ಯುಸಿ ಶಿವರಾಜ್ ಕುಮಾರ್.

ಕಳೆದ ವರ್ಷ ಅಕ್ಟೋಬರ್ 29 ರಂದು ಬಿಡುಗಡೆ ಆದ ‘ಭಜರಂಗಿ 2’ ಸಿನಿಮಾದ ಬಳಿಕ ಶಿವಣ್ಣನ ಇನ್ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ‘ಭಜರಂಗಿ 2’ ಸಿನಿಮಾ ಬಿಡುಗಡೆ ಆದ ದಿನವೇ ಪುನೀತ್ ರಾಜ್‌ಕುಮಾರ್ ಕಾಲವಾದ ಕಾರಣ ಆ ಸಿನಿಮಾ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಂಡಿರಲಿಲ್ಲ. ಹಾಗಾಗಿ ಶಿವಣ್ಣನ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಇದೀಗ ಶಿವರಾಜ್ ಕುಮಾರ್ ನಟನೆಯ ‘ಬೈರಾಗಿ’ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ತಮಿಳಿನ ನಿರ್ದೇಶಕ ನಿರ್ದೇಶನ ಮಾಡಿರುವ ಈ ಸಿನಿಮಾದ ಬಗ್ಗೆ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ತಮ್ಮ ಸಿನಿಮಾ ಬಗ್ಗೆ ಶಿವಣ್ಣ ಸಹ ಖುಷಿಯಿಂದಲೇ ಮಾತನಾಡಿದ್ದಾರೆ.

‘ಬೈರಾಗಿ’ ಪ್ಯಾನ್ ಇಂಡಿಯಾ ಸಿನಿಮಾನ?
ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್, ”ನನ್ನ ಮುಂದಿನ ಸಿನಿಮಾ ‘ಬೈರಾಗಿ’ ಎಂದಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಶಿವರಾಜ್ ಕುಮಾರ್, ‘ಇಲ್ಲ ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಅಪ್ಪಟ ಕನ್ನಡದ ಸಿನಿಮಾ ಅಷ್ಟೆ” ಎಂದಿದ್ದಾರೆ.

ಹುಲಿ ವೇಷ ಹಾಕುವವನ ಕತೆ ‘ಬೈರಾಗಿ’

”ಬೈರಾಗಿ’ ಹುಲಿ ವೇಷ ಹಾಕುವ ವ್ಯಕ್ತಿಯೊಬ್ಬನ ಕತೆ. ಜೊತೆಗೆ ಸಾಕಷ್ಟು ಭಾವನೆಗಳು ತುಂಬಿರುವ ಕತೆ. ಸಿನಿಮಾದಲ್ಲಿ ಹಲವು ಪಾತ್ರಗಳಿದ್ದು, ಎಲ್ಲ ಪಾತ್ರಗಳ ಭಾವನೆಯನ್ನು ಹೇಗೆ ನಾಯಕ ನಟ ತೂಗಿಸಿಕೊಂಡು, ಬೇರೊಬ್ಬರ ಭಾವನೆಗಳ ಜೊತೆಗೆ ಬದುಕುತ್ತಾ ಸಾಗುತ್ತಾನೆ. ಹಾಗೂ ನಾಯಕ ನಟನ ಭಾವನೆ ಏನಾಗಿರುತ್ತದೆ ಎಂಬುದು ಸಿನಿಮಾದ ಕತೆ” ಎಂದಿದ್ದಾರೆ ಶಿವರಾಜ್ ಕುಮಾರ್.

ಬಹುತಾರಾಗಣದ ‘ಬೈರಾಗಿ’

‘ಬೈರಾಗಿ’ ಬಹು ತಾರಾಗಣ ಇರುವ ಸಿನಿಮಾ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಡಾಲಿ ಧನಂಜಯ್ ಹಾಗೂ ‘ದಿಯಾ’ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಶಿವಣ್ಣ ಭಿನ್ನ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹುಲಿ ವೇಷ ಧಾರಿಯಾಗಿ, ಕಾಲೇಜು ಹುಡುಗನ ಅವತಾರದಲ್ಲಿ, ಜೈಲಿನಲ್ಲಿ ಖೈದಿಯಾಗಿ ಹೀಗೆ ಹಲವು ಅವತಾರಗಳು ಶಿವಣ್ಣನಿಗೆ ಈ ಸಿನಿಮಾದಲ್ಲಿದೆ. ಸಿನಿಮಾವನ್ನು ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದಾರೆ.

ಶಿವರಾಜ್ ಕುಮಾರ್ ಮುಂಬರುವ ಸಿನಿಮಾಗಳು

ಇನ್ನು ಶಿವರಾಜ್ ಕುಮಾರ್ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ‘ಬೈರಾಗಿ’ ಬಿಡುಗಡೆ ಆದ ಬಳಿಕ ಶಿವಣ್ಣನ ಹೋಮ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ‘ವೇದ’ ಬಿಡುಗಡೆ ಆಗಲಿದೆ. ಅದರ ಬಳಿಕ, ‘ನೀ ಸಿಗೊವರೆಗೂ’ ಸಿನಿಮಾ ತೆರೆಗೆ ಬರಲಿದೆ. ಇವುಗಳ ಜೊತೆಗೆ ಶಿವಣ್ಣನಿಗಾಗಿ ರಿಷಬ್ ಶೆಟ್ಟಿ ಸಿನಿಮಾ ಒಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಪನ್ನಗಾಭರಣ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನ ನಿರ್ದೇಶಕನೊಬ್ಬ ಶಿವಣ್ಣನಿಗಾಗಿ ಸಿನಿಮಾ ಮಾಡುತ್ತಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ದೇಶಿಸಿದ್ದ ಸಚಿನ್ ರವಿ, ಶಿವಣ್ಣನಿಗಾಗಿ ಸೂಪರ್ ಮ್ಯಾನ್ ಕತೆಯುಳ್ಳ ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ದರ್ಶನ್ ಸಿನಿಮಾ 1500 ಕೋಟಿ ಮಾಡುತ್ತೆ ಬರೆದಿಟ್ಟುಕೊಳ್ಳಿ' ರಾಜೇಂದ್ರ ಸಿಂಗ್ ಬಾಬು!

Fri May 27 , 2022
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಅಭಿಮಾನಿಗಳ ಬಗ್ಗೆ ಮಾತಾಡೋ ಹಾಗೇ ಇಲ್ಲ. ದರ್ಶನ್ ಒಂದೇ ಒಂದು ಫೋಟೊ, ವಿಡಿಯೋ ಸಿಕ್ಕರೇ ಸಾಕು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ ಬಿಡುತ್ತಾರೆ. ಇನ್ನು ಸಿನಿಮಾ ಅಂದರೆ ಕೇಳಬೇಕಾ? ಥಿಯೇಟರ್‌ ಮುಂದೆ ಅಭಿಮಾನಿಗಳ ಆರ್ಭಟ ಕೇಳಲೇ ಬೇಕಿಲ್ಲ. ಬಾಕ್ಸಾಫೀಸ್‌ನಲ್ಲೂ ಅಷ್ಟೇ ದರ್ಶನ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿವೆ. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಅಭಿನಯಿಸಿದ ಎರಡು ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರಿದ್ದು, ‘ಕ್ರಾಂತಿ’ ಸಿನಿಮಾ […]

Advertisement

Wordpress Social Share Plugin powered by Ultimatelysocial