ನವದೆಹಲಿ, ಮೇ 18 – 263 ಚೀನಾ ಪ್ರಜೆಗಳ ವೀಸಾ ನೀಡಲು 50 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ಸಂಸದ ಕಾರ್ತಿ ಚಿದಂಬರಂ ಅವರ ನಿಕಟವರ್ತಿ ಎಸ್ ಭಾಸ್ಕರರಾಮನ್ ಅವರನ್ನು ಸಿಬಿಐ ಬಂಧಿಸಿದೆ. ಸಿಬಿಐ ನಿನ್ನೆ ತಡರಾತ್ರಿ ಭಾಸ್ಕರರಾಮನ್ ಅವರನ್ನು ವಿಚಾರಣೆಗೆ ಕರೆದೊಯ್ದಿದೆ ಮತ್ತು ಇಂದು ಮುಂಜಾನೆ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾನ್ಸಾ ಮೂಲದ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿರುವ 263 ಚೀನೀ ಕಾರ್ಮಿಕರಿಗೆ ಪ್ರಾಜೆಕ್ಟ ವೀಸಾಗಳನ್ನು ಮರುಹಂಚಿಕೆ ಮಾಡಲು ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್ ನ ಅಂದಿನ ಅಸೋಸಿಯೇಟ್ ಉಪಾಧ್ಯಕ್ಷ ವಿಕಾಸ್ ಮಖಾರಿಯಾ ಅವರು ಭಾಸ್ಕರರಾಮನ್ ಅವರನ್ನು ಸಂಪರ್ಕಿಸಿ ಅಕ್ರಮ ವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದೆ.
ಚೀನೀ ಕಂಪನಿಯ ಅಧಿಕಾರಿಗಳಿಗೆ ಮಂಜೂರು ಮಾಡಲಾದ 263 ಪ್ರಾಜೆಕ್ಟ ವೀಸಾಗಳನ್ನು ಉಕ್ಕು ಕ್ಷೇತ್ರಕ್ಕೆ 2010 ರಲ್ಲಿ ಪರಿಚಯಿಸಲಾದ ವಿಶೇಷ ರೀತಿಯ ವೀಸಾವಾಗಿದ್ದು, ಪಿ ಚಿದಂಬರಂ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ವಿವರವಾದ ಮಾರ್ಗಸೂಚಿಗಳನ್ನು ನೀಡಲಾಯಿತು ಆದರೆ ಪ್ರಾಜೆಕ್ಟ ವೀಸಾಗಳ ಮರುಹಂಚಿಕೆಗೆ ಯಾವುದೇ ಅವಕಾಶವಿಲ್ಲ ಎಂದು ಎಫಐಆರ್ನಲ್ಲಿ ಆಪಾದಿಸಲಾಗಿದೆ.
ಪ್ರಚಲಿತ ಮಾರ್ಗಸೂಚಿಗಳ ಪ್ರಕಾರ, ಅಪರೂಪದ ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಪರಿಗಣಿಸಬಹುದು ಮತ್ತು ಗೃಹ ಕಾರ್ಯದರ್ಶಿಯ ಅನುಮೋದನೆಯೊಂದಿಗೆ ಮಾತ್ರ ನೀಡಬಹುದು.
ಪ್ರಾಜೆಕ್ಟ ವೀಸಾಗಳನ್ನು ಮರುಬಳಕೆ ಮಾಡಲು ಅನುಮೋದನೆ ಕೋರಿ ಒಂದು ತಿಂಗಳೊಳಗೆ ಅನುಮೋದನೆ ನೀಡಲಾಯಿತು ಮತ್ತು ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ 17, 2011 ರಂದು, ಭಾಸ್ಕರರಾಮನ್ ನಿರ್ದೇಶಿಸಿದ ನಂತರ, ಮಖಾರಿಯಾ ಅವರು ಜುಲೈ 30, 2011 ರ ಮೇಲಿನ ಪತ್ರದ ಪ್ರತಿಯನ್ನು ಇ-ಮೇಲ್ ಮೂಲಕ ಕಾರ್ತಿಗೆ ರವಾನಿಸಿದರು ಎಂದು ತಿಳಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada