‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ 9ನೇ ವಾರ ‘ಬೆಸ್ಟ್ ಪರ್ಫಾಮೆನ್ಸ್’ ಮೆಡೆಲ್ ಪಡೆದಿದ್ದಾರೆ ಅನುಪಮಾ ಗೌಡ.

 

ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ 9ನೇ ವಾರ ‘ಬೆಸ್ಟ್ ಪರ್ಫಾಮೆನ್ಸ್’ ಮೆಡೆಲ್ ಪಡೆದಿದ್ದಾರೆ ಅನುಪಮಾ ಗೌಡ. ಇನ್ನೂ ‘ಕಳಪೆ’ ಪಟ್ಟ ಆರ್ಯವರ್ಧನ್ ಗುರೂಜಿ ಪಾಲಾಗಿದೆ. ಆರ್ಯವರ್ಧನ್ ಗುರೂಜಿ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಿರುವ ಕಾರಣ ಇಂದು ಅವರು ಜೈಲುವಾಸ ಅನುಭವಿಸಿಲ್ಲ.ಅನುಪಮಾ ಗೌಡ ಈ ವಾರ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ ಎಂದು ಅಮೂಲ್ಯ ಗೌಡ, ವಿನೋದ್ ಗೊಬ್ಬರಗಾಲ, ದಿವ್ಯಾ ಉರುಡುಗ, ಕಾವ್ಯಶ್ರೀ ಗೌಡ, ಅರುಣ್ ಸಾಗರ್, ರಾಕೇಶ್ ಅಡಿಗ ಹೇಳಿದರು. ಪರಿಣಾಮ, ‘ಉತ್ತಮ’ ಮೆಡಲ್ ಅನುಪಮಾ ಗೌಡ ಅವರಿಗೆ ಲಭಿಸಿತು.ರೂಪೇಶ್ ಶೆಟ್ಟಿ ‘ಬೆಸ್ಟ್’ ಎಂದು ಆರ್ಯವರ್ಧನ್ ಗುರೂಜಿ, ಅನುಪಮಾ ಗೌಡ, ದೀಪಿಕಾ ದಾಸ್, ಪ್ರಶಾಂತ್ ಸಂಬರಗಿ ಹಾಗೂ ರೂಪೇಶ್ ರಾಜಣ್ಣ ಹೇಳಿದರು. ಒಂದು ವೋಟ್‌ನಲ್ಲಿ ‘ಉತ್ತಮ’ ಪಟ್ಟ ರೂಪೇಶ್ ಶೆಟ್ಟಿ ಕೈಯಿಂದ ಮಿಸ್ ಆಯ್ತು. ಇನ್ನೂ ರಾಕೇಶ್ ‘ಅತ್ಯುತ್ತಮ’ ಎಂದು ರೂಪೇಶ್ ಶೆಟ್ಟಿ ವೋಟ್ ಮಾಡಿದ್ದರು.ಸ್ವಿಮ್ಮಿಂಗ್ ಪೂಲ್‌ನಲ್ಲಿದ್ದ ಪಂಜರದ ನಟ್‌ಗಳನ್ನು ಬಿಚ್ಚುವ ಟಾಸ್ಕ್‌ನಲ್ಲಿ ನಿಯಮ ಮುರಿದ ಕಾರಣಕ್ಕೆ, ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದ ಕಾರಣಕ್ಕೆ ಆರ್ಯವರ್ಧನ್ ಗುರೂಜಿ ಈ ವಾರ ಕಳಪೆ ಎನಿಸಿಕೊಂಡರು. ಅಮೂಲ್ಯ ಗೌಡ, ವಿನೋದ್ ಗೊಬ್ಬರಗಾಲ, ಅನುಪಮಾ ಗೌಡ, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ, ಅರುಣ್ ಸಾಗರ್, ರಾಕೇಶ್ ಅಡಿಗ, ದೀಪಿಕಾ ದಾಸ್… ಆರ್ಯವರ್ಧನ್ ಗುರೂಜಿಗೆ ಕಳಪೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಎಚ್‌.ಕೆ. ಪಾಟೀಲ್ ಹೇಳಿಕೆ.

Sat Dec 24 , 2022
ಮಹದಾಯಿಯಲ್ಲಿ ನಮ್ಮ ಪಾಲಿನ ನೀರು ನಮಗೆ ಸಿಗಬೇಕು. 200 ಟಿಎಮ್‌ಸಿ ನೀರು ನ್ಯಾಷನಲ್ ವೇಸ್ಟ್ ಆಗುತ್ತಿದೆ. ಗೋವಾ ರಾಜ್ಯ ಅನವಶ್ಯಕ ಕ್ಯಾತೆ ತೆಗೆದಿದೆ. ಸಮುದ್ರದ ಮೀನು ಸಾಯುತ್ತೆ, ಪರಿಸರಕ್ಕೆ ವ್ಯತಿರಿಕ್ತವಾಗುತ್ತೆ ಅಂತಾ ತಂಟೆ ತೆಗೆದಿದ್ದಾರೆ. ಟ್ರಿಬ್ಯುನಲ್ ನಿರ್ಣಯದಲ್ಲಿ 13.6 ಟಿಎಮ್‌ಸಿ ನೀರುವ ನಮಗೆ ಮಂಜೂರಾಗಿದೆ. ನಮ್ಮ ನೀರನ್ನು ನಾವು ಪಡೆಯಲು ಕಾಮಗಾರಿ ಪ್ರಾರಂಭಿಸಬೇಕು. ನೀರು ಬಳಸಿಕೊಳ್ಳಲು ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಮಾಡುವುದಾಗಿ ಯಡಿಯೂರಪ್ಪ […]

Advertisement

Wordpress Social Share Plugin powered by Ultimatelysocial