ಈ ಕುರಿತು ಅನೀಶ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ, ಹುಬ್ಬಳ್ಳಿ ಇವರು ಪ್ರಕಟಣೆ ಹೊರಡಿಸಿದ್ದು, ಈ ಕೆಳಕಂಡಂತೆ ರೈಲು ಸೇವೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ.
1) ದಿನಾಂಕ 07.01.2022 ರ ರೈಲು ಸಂಖ್ಯೆ 17392 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ – ಕೆ.ಎಸ್.ಆರ್ ಬೆಂಗಳೂರು ನಿತ್ಯ ಸೇವೆಯ ಎಕ್ಸ್ ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 40 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.
2) ದಿನಾಂಕ 07.01.2022 ರ ರೈಲು ಸಂಖ್ಯೆ 16228 ತಾಳಗುಪ್ಪ – ಮೈಸೂರು ನಿತ್ಯ ಸೇವೆಯ ಎಕ್ಸ್ ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 20 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.
- ಮೊದಲಿನ ಮಾರ್ಗದಲ್ಲಿ ರೈಲು ಸಂಚಾರ
ದಕ್ಷಿಣ ರೈಲ್ವೆಯ ಸೇಲಂ ವಿಭಾಗದ ಓಮಲೂರ್ ಮತ್ತು ಮೆಟ್ಟೂರ್ಡ್ಯಾಮ್ ನಡುವೆ ಹಳಿಗಳ ದ್ವಿಪಥ ಕಾಮಗಾರಿಯ ಸಲುವಾಗಿ ಸಿಗ್ನಲಿಂಗ್ ವ್ಯವಸ್ಥೆಗಳ ಸಂಪರ್ಕ ಕಡಿತಗೊಳಿಸುವ ಕಾರಣದಿಂದ ಈ ಕೆಳಗಿನ ರೈಲುಗಳ ಮಾರ್ಗ ಬದಲಾವಣೆ ಯನ್ನು ಸೂಚಿಸಿತ್ತು. (ದಿನಾಂಕ 22.12.2021 ರ ಪತ್ರಿಕಾ ಪ್ರಕಟಣೆ ಸಂಖ್ಯೆ. 467ಯ ಅನುಸಾರ). ಸಧ್ಯ, ಓಮಲೂರ್ ಮತ್ತು ಮೆಟ್ಟೂರ್ಡ್ಯಾಮ್ ನಡುವಿನ ನಿಯೋಜಿತ ಬ್ಲಾಕ್ ಮುಂದೂಡಲ್ಪಟ್ಟಿರುವುದೆಂದು ದಕ್ಷಿಣ ರೈಲ್ವೆಯು ಸೂಚಿಸಿ ಆ ಕಾರಣ ಈ ಕೆಳಗಿನ ರೈಲುಗಳು ತಮ್ಮ ಮೊದಲಿನ ಸಾಮಾನ್ಯ ಮಾರ್ಗದಲ್ಲಿ ಸಂಚರಿಸಲಿವೆ ಎಂದು ತಿಳಿಸಿದೆ.
- ದಿನಾಂಕ 02.01.2022 ಹಾಗೂ 02.03.2022 ರ ರೈಲು ಸಂಖ್ಯೆ. 11014 ಕೊಯಮತ್ತೂರು – ಲೋಕಮಾನ್ಯ ತಿಲಕ್ ಟರ್ಮಿನಸ್ ನಿತ್ಯಸೇವೆಯ ಎಕ್ಸ್ ಪ್ರೆಸ್.
- ದನಾಂಕ 02.03.2022 ರ ರೈಲು ಸಂಖ್ಯೆ. 12678 ಎರ್ನಾಕುಲಮ್ – ಕೆ.ಎಸ್.ಆರ್ ಬೆಂಗಳೂರು ನಿತ್ಯಸೇವೆಯ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್.
- ದಿನಾಂಕ 02.03.2022 ರ ರೈಲು ಸಂಖ್ಯೆ. 12677 ಕೆ. ಎಸ್. ಆರ್ ಬೆಂಗಳೂರು – ಎರ್ನಾಕುಲಮ್ ನಿತ್ಯಸೇವೆಯ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್.
III. ರೈಲುಗಳ ಸೇವೆ ರದ್ದು
ನಾಯಂಡ ಹಳ್ಳಿ ಯಾರ್ಡ್ದಲ್ಲಿ ಥಿಕ್ ವೆಬ್ ಸ್ವಿಚ್ಗಳ ಕೆಲಸದ ಅಳವಡಿಕೆ ಕಾಮಗಾರಿ ಕೈಗೊಂಡಿರುವ ನಿಮಿತ್ತ, ಕೆಳಗಿನ ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ:-
- ರೈ. ಸಂ. 06560 ಮೈಸೂರುದಿಂದ ಚಲಿಸುವ ಮೈಸೂರು – ಕೆಎಸ್ಆರ್ ಬೆಂಗಳೂರು ಮೆಮು ರೈಲು30.12.2021, 04.01.2022 & 06.01.2022 ರಂದು ರದ್ದುಗೊಳಿಸಲಾಗುತ್ತದೆ.
- ರೈ. ಸಂ. 06559 ಕೆಎಸ್ಆರ್ ಬೆಂಗಳೂರುದಿಂದ ಚಲಿಸುವ ಕೆಎಸ್ಆರ್ ಬೆಂಗಳೂರು – ಮೈಸೂರು ಮೆಮು ರೈಲು 31.12.2021, 05.01.2022 & 07.01.2022 ರಂದು ರದ್ದುಗೊಳಿಸಲಾಗುತ್ತದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: