ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಸುದ್ದಿಗೋಷ್ಟಿ.
ಸಿಎಮ್ ಬಸವರಾಜ್ ಬೊಮ್ಮಾಯಿಯವರು ಅಭಿವೃದ್ಧಿ ಪರವಾದ ಬಜೆಟ್ ಮಂಡಿಸಿದ್ದಾರೆ.
ಜನರೇ ಕಾಂಗ್ರೆಸ್ನವರ ಕಿವಿಯಲ್ಲಿ ಹೂವು ಮುಡಿಸಿದ್ದಾರೆ.
ಸಿದ್ದರಾಮಯ್ಯ ಯಾಕೆ ಸೋತರು ಅಂತಾ ಹೇಳಲು ತಯಾರಿಲ್ಲ.
ಸಿದ್ದರಾಮಯ್ಯನವರದು ಪಲಾಯನ ಮಾಡುವ ಕೆಲಸ.
13 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಯಾವುದೇ ರೀತಿಯ ಹೆಜ್ಜೆಗುರುತು ಬಿಟ್ಟುಹೋಗಿಲ್ಲ.
ಪ್ರೂಫ್ ಇಲ್ಲದೆ ಮಾತಾಡುತ್ತಾರೆ, ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ.
ಯಾವುದೇ ವಿಷಯವನ್ನು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ಯಲ್ಲಾ.
ಸುರ್ಜೇವಾಲಾ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿ ಬಂದು ಏನು ಮಾಡುತ್ತಿದ್ದಾರೆ…?
ಕಾಂಗ್ರೆಸ್ ಸರ್ಕಾರ ಇದ್ದಾಗಿನ ರೈತರ ಆತ್ಮಹತ್ಯೆ, ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಅವರು ಮಾತಾಡಲ್ಲಾ.
ಬಿಜೆಪಿ ನೇತ್ರತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸಲು ಆಗುತ್ತಿಲ್ಲ.
ಕಾಂಗ್ರೆಸ್ನವರು ಕೇವಲ ಘೋಷಣೆಗಳನ್ನು ಮಾಡುತ್ತಿದ್ದಾರೆ.
ಯಾವ ರೀತಿ ಹಣಕಾಸು ಹೊಂದಿಕೆ ಮಾಡಿಕೊಳ್ಳುತ್ತಾರೆ ಹೇಳಲ್ಲಾ.
ಕಾಂಗ್ರೆಸ್ನವರು ಕೇವಲ 40% ಆರೋಪ ಮಾಡುತ್ತಾರೆ.
ಯಾವುದಾದರೂ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ.
ಇವರ ಮಾತು ಕೇಳಿ ಆರೋಪ ಮಾಡಿದ್ದ ಕೆಂಪಣ್ಣ ಜೈಲಿಗೆ ಹೋಗಬೇಕಾಯಿತು.
ಜಗದೀಶ್ ಶೆಟ್ಟರ್ ನಮ್ಮ ನಾಯಕರು, ಅವರನ್ನು ಕಡೆಗಣಿಸುವ ಪ್ರಶ್ನೆ ಬರಲ್ಲ.
ಅವರಿಗೆ ಪಕ್ಷ ಹತ್ತು ಬಾರಿ ಟಿಕೆಟ್ ಕೊಟ್ಟರು ಗೆಲ್ಲಿಸುತ್ತೇವೆ.
ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಬಗ್ಗೆ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆ ಆಗುತ್ತೆ.
ಗುಜರಾತ್ ಮಾದರಿ ಟಿಕೆಟ್ ಹಂಚಿಕೆ ಅಭಿವೃದ್ಧಿ ಪರವಾಗಿದ್ದರೆ ಅದನ್ನೂ ತೆಗೆದುಕೊಳ್ಳುತ್ತೇವೆ.
ಮಂಡಳ ಪ್ರಮುಖರಿಂದ ರಾಜ್ಯಾದ್ಯಕ್ಷರ ವರೆಗೆ ಚರ್ಚೆ ನಡೆದು ಟಿಕೆಟ್ ಅಂತಿಮವಾಗುತ್ತೆ.
ಕಾಂಗ್ರೆಸ್ನವರ ಪಟ್ಟಿ ಎಲ್ಲಿದೆ ಇನ್ನೂ ಪತ್ತೆಯಿಲ್ಲ.
ಅನೇಕ ಕಡೆ ಅವರಿಗೆ ಅಭ್ಯರ್ಥಿಗಳೇ ಇಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada