ಬಿಜೆಪಿ ಸರ್ಕಾರ ಜನರಿಗೆ ಶೇ.90ರ ರಷ್ಟು ವಚನ ವಂಚನೆ ಮಾಡಿದೆ.

ಮೈಸೂರು: ಬಿಜೆಪಿ ಸರ್ಕಾರ ಜನರಿಗೆ ಶೇ.90ರ ರಷ್ಟು ವಚನ ವಂಚನೆ ಮಾಡಿದೆ. ಜನರಿಗೆ ಕೊಟ್ಟ ಯಾವ ಕಾರ್ಯಕ್ರಮಗಳೂ ಜಾರಿಯಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದರು.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಬೆಳಗ್ಗೆ ಬಜೆಟ್ ಘೋಷಣೆ ಮಾಡ್ತಾ ಇದ್ದಾರೆ.

ಇದು ಬಿಜೆಪಿ ಕೊನೆಯ ಬಜೆಟ್. ಹಿಂದಿನ ಬಜೆಟ್ ಕೂಡ ಬರಿ ಘೋಷಣೆ, ಭರವಸೆಯ ಬಜೆಟ್ ಆಗಿತ್ತು. ನಾಳೆ ಮಂಡನೆ ಮಾಡುವ ಬಜೆಟ್ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಲಿದೆ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ನುಡಿದಂತೆ ನಡೆದಿದ್ದೇನೆ ಎನ್ನುತ್ತಾರೆ. ಹಾಗಾದರೇ ಹಿಂದಿನ ಬಜೆಟ್ ರಿಪೋರ್ಟ್ ಕೊಡಬೇಕು. ಬಸವಣ್ಣ ನವರ ಹೆಸರಿಟ್ಟುಕೊಂಡಿದ್ದೀರಿ. ಮೊದಲು ಹಿಂದಿನ ರಿಪೋರ್ಟ್ ಕೊಡಬೇಕು ಎಂದು ಆಗ್ರಹಿಸಿದರು.

ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಶೇ 90 ರಷ್ಟನ್ನು ಬಿಜೆಪಿ ಈಡೇರಿಸಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಯಡಿಯೂರಪ್ಪನವರು ರೈತರ ಶಾಲು ಹಾಕಿ ಪ್ರಮಾಣ ವಚನ ಸ್ವೀಕರಿಸಿದರು. ಬರಿ ಸುಳ್ಳಿನ ಸರಮಾಲೆಯನ್ನು ಸೃಷ್ಟಿಸಿದರು. ರೈತ ನಿಧಿ ಎಲ್ಲಿಟ್ಟಿದ್ದೀರಿ, ರೈತರಿಗೆ 10 ಗಂಟೆ ವಿದ್ಯುತ್ ಎಲ್ಲಿ ಕೊಟ್ರಿ ಎಂದು ಪ್ರಶ್ನಿಸಿದರು.

ನಾವು ಸುಮಾರು170 ಪ್ರಶ್ನೆ ಕೇಳಿದ್ದೇವೆ. ಆದರೆ ಸಿಎಂ ಬೊಮ್ಮಾಯಿ ಸರ್ಕಾರ ಒಂದಕ್ಕೂ ಉತ್ತರ ನೀಡಿಲ್ಲ. ಸುಳ್ಳು ಹೇಳಲು ಒಂದು ಮಿತಿ ಇರಬೇಕು. ಅಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದ್ರಿ.ಜನರಿಗೆ ವಂಚನೆ ಮಾಡಿಕೊಂಡು ಬಂದಿರಿ. ನೀವು ಅಧಿಕಾರದಲ್ಲಿರಲು ಲಾಯಕ್ಕಿಲ್ಲ ಎಂದು ಬಿಜೆಪಿ ಕಿಡಿಕಾರಿದರು.

26 ಆಶ್ವಾಸನೆಗಳನ್ನು ಹೆಣ್ಣು ಮಕ್ಕಳಿಗೆ ಕೊಟ್ಟಿದ್ದರು. ಅದರಲ್ಲಿ24 ಅನ್ನು ಅನುಷ್ಟಾನ ಮಾಡಿಲ್ಲ. ಯುವಕರಿಗೆ 18 ಕಾರ್ಯಕ್ರಮಗಳ ಭರವಸೆ ಕೊಟ್ಟಿದ್ದರು ಅದರಲ್ಲಿ 17 ಭರವಸೆಗಳನ್ನು ಈಡೇರಿಸಿಲ್ಲ. ಎಸ್ಸಿ, ಎಸ್ಟಿ ಜನರಿಗೆ ಭಾರಿ ಅನ್ಯಾಯ ಮಾಡಿದ್ದಾರೆ. ಬಜೆಟ್ ಪುಸ್ತಕವನ್ನು ತೆಗೆದೇ ನೋಡಿಲ್ಲ ಇವರು. ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ಎಲ್ಲಿ ಕೊಟ್ಟಿದ್ದೀರಿ ತೋರಿಸಿ. ನಾವು ಕೊಟ್ಟ ಭರವಸೆಗಳಲ್ಲಿ ಶೇ 90 ರಷ್ಟನ್ನು ಈಡೇರಿಸಿದ್ದೇವೆ. ನಿಮ್ಮ ಕಾಲಾವಧಿಯಲ್ಲಿ ಕರ್ನಾಟಕವನ್ನು ಕರಪ್ಶನ್ ಕ್ಯಾಪ್ಟನ್ ಮಾಡಿಬಿಟ್ಟಿರಿ ಎಂದು ಹರಿಹಾಯ್ದರು.

ಮೈಸೂರು-ಬೆಂಗಳೂರು ಹೈವೆಯಲ್ಲಿ ಸರ್ವಿಸ್ ರೋಡೇ ಇಲ್ಲ. ಟೋಲ್ ಯಾಕೆ

ಮೈಸೂರು ಬೆಂಗಳೂರು ಹೈವೆಯಲ್ಲಿ ಸರ್ವಿಸ್ ರೋಡೇ ಇಲ್ಲ. ಟೋಲ್ ಯಾಕೆ ಕೊಡಬೇಕು.? ಸರ್ವಿಸ್ ರೋಡ್ ಕೊಡದೆ ನೀವು ಟೋಲ್ ಸಂಗ್ರಹ ಮಾಡೋ ಆಗಿಲ್ಲ. ಆಲ್ಟರ್ ನೇಟಿವ್ ಸರ್ವಿಸ್ ಕೊಟ್ಟು ನಂತರ ನೀವು ಟೋಲ್ ಕಲೆಕ್ಟ್ ಮಾಡಿ. ಇಲ್ಲ ಅಂದರೆ ನಿಮ್ಮ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹಗೆ ಎಚ್ಚರಿಕೆ ನೀಡಿದರು.

ಬಚ್ಚಲು ಬಾಯಿಗೆ ಉತ್ತರ ಕೊಡುವಷ್ಟು ಕೆಳಮಟ್ಟಕ್ಕೆ ಇಳಿಯಲ್ಲ

ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಮತ್ತು ಪ್ರಚೋದನಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ, ಅಶ್ವಥ್ ನಾರಾಯಣ್ ಮಾತಿಗೆ ನಾನು ಉತ್ತರ ಕೊಡಲ್ಲ. ಆ ಬಚ್ಚಲು ಬಾಯಿಗೆ ನಾನು ಉತ್ತರ ಕೊಡುವಷ್ಟು ಮಟ್ಟಿಗೆ ನಾನು ಕೆಳ ಮಟ್ಟಕ್ಕೆ ಇಳಿಯಲ್ಲ. ಇದಕ್ಕೆ ಸಿಎಂ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರೆ ಉತ್ತರ ಕೊಡಬೇಕು ಎಂದು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್, ಎಂಎಲ್ ಸಿ ಧರ್ಮಸೇನ, ಮಾಜಿ ಶಾಸಕ ಸೋಮಶೇಖರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದರ್ಶನ್ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳು ಭರ್ಜರಿಯಾಗಿ ಆಚರಿಸುತ್ತಿದ್ದಾರೆ.

Thu Feb 16 , 2023
ಇಂದು ( ಫೆಬ್ರವರಿ 16 ) ಕನ್ನಡ ಚಲನಚಿತ್ರರಂಗದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತಮ್ಮ 46ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಕೊರೊನಾ ಹಾಗೂ ಗೆಳೆಯ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ಕಾರಣದಿಂದಾಗಿ ಹುಟ್ಟುಹಬ್ಬ ಆಚರಣೆಯಿಂದ ಹಿಂದೆ ಸರಿದಿದ್ದ ದರ್ಶನ್ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳು ಭರ್ಜರಿಯಾಗಿ ಆಚರಿಸುತ್ತಿದ್ದಾರೆ. ಹುಟ್ಟುಹಬ್ಬದಂದು ಕಳೆದೆರಡು ವರ್ಷಗಳಲ್ಲಿ ತಮ್ಮ ಸೆಲೆಬ್ರಿಟಿಗಳಿಗೆ ಸಿಗದಿದ್ದ ದರ್ಶನ್ ಈ ಬಾರಿ ತಮ್ಮ ಮನೆಗೆ ಬಂದಿರುವ […]

Advertisement

Wordpress Social Share Plugin powered by Ultimatelysocial